SUDDILIVE || SHIVAMOGGA
ಗಾಂಧಿ ಪಾರ್ಕ್ ಬಳಿ ಸಿಹಿ ಹಂಚಿ ಸಂಭ್ರಮಾಚರಣೆ-Celebration by distributing sweets near Gandhi Park
ನಿನ್ನೆ ಆರ್ಸಿಬಿ ತಂಡ ಟಿ20 ಕಪ್ ಅನ್ನು ಗೆಲ್ಲುತ್ತಿದ್ದಂತೆ ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಸಂಭ್ರಮಾಚರಣೆ ನಡೆದಿತ್ತು ಅದರಂತೆ ಬೆಳಗ್ಗೆಯೂ ಸಹ ಸಂಭ್ರಮಾಚರಣೆಯ ಮುಂದುವರೆದಿದೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಸಿಹಿ ಹಂಚಿ ಸಂಭ್ರಮಿಸಿದೆ.
ಈ ವೇಳೆ ಕಾಲೇಜು ವಿದ್ಯಾರ್ಥಿನಿ, ಆಟೋ ಚಾಲಕರಿಗೆ ಸಿಹಿ ಹಂಚುವ ಮೂಲಕ ಯುವ ಘಟಕ ಸಂಭ್ರಮಿಸಿದೆ. ಈ ವೇಳೆ ಮಾತನಾಡಿದ ಬಳ್ಳೆಕೆರೆ ಸಂತೋಷ್ 17 ವರ್ಷದಿಂದ ಅನೇಕ ಬಾರಿ ಫೈನಲ್ ತಲುಪಿದರು ಕಪ್ ಗೆದ್ದಿರಲಿಲ್ಲ. ಈ ಬಾರಿ ಕಪ್ ಗೆದ್ದು ರಾಜ್ಯಕ್ಕೆ ಹೆಚ್ಚು ಗೌರವ ತಂದಿದೆ ಎಂದರು.
ಅಧ್ಯಕ್ಷ ಸಚಿನ್, ಪ್ರ.ಕಾ ಅನಿಲ್ ಪಟೇಲ್, ಕಾರ್ಯದರ್ಶಿಯಾಗಿ ಅವಿನಾಶ್,ಮುಖಂಡರಾದ ಅಂಕುಆ್ ಬಳ್ಳೆಕೆರೆ ಸಂತೋಷ್ ಸೋಮನಾಥ್ ಕೆ.ಆರ್, ಮಲ್ಲಿಕಾರ್ಜುನ್ ಕಾನೂರ್, ರಾಜಶೇಖರ್,ಉಮೇಶ್ ಹಾಗೂ ಮೊದಲಾದವರು ಭಾಗಿಯಾಗಿದ್ದರು.
Celebration by distributing sweets