SUDDILIVE || SHIVAMOGGA
ಕಾಂಗ್ರೆಸ್ ಮುಸ್ಲೀಂರಿಗೆ ರಾಜ್ಯವನ್ನೇ ಮಾರಾಟ ಮಾಡುವ ಸಾಧ್ಯತೆಯಿದೆ-ಈಶ್ವರಪ್ಪ-Congress likely to sell state to Muslims: Eshwarappa
ಈಗಿನ ಕಾಂಗ್ರೆಸ್ ಮುಸ್ಲೀರಿಗೆ ರಾಜ್ಯವನ್ನೇ ಮಾರಾಟ ಮಾಡುವ ಸಾಧ್ಯತೆಯಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿ ಬಜೆಟ್ ನಲ್ಲಿ 900 ಕೋಟಿ ಘೋಷಿಸಿದ್ದರು. ಈ ಬಾರಿ 1914 ಕೋಟಿ ಹಣ ಮುಸ್ಲೀಂರಿಗೆ ಬಜೆಟ್ ನಲ್ಲಿ ನೀಡಲಾಗುತ್ತಿದೆ. ಶಾದಿ ಭಾಗ್ಯ, ಮುಲ್ಲಾ ಗಳಿಗೆ ಸಂಬಳ ಜಾಸ್ತಿಯಾಗಿದೆ. ಹಿಂದುಳಿದವರು ಮತ್ತು ದಲಿತರು ಎಂದು ಹೇಳುವ ಕಾಂಗ್ರೆಸ್ ಮೂಲೆಗೆ ತಳ್ಳಿದೆ ಎಂದು ದೂರಿದರು.
15% ವಸತಿ ಮೀಸಲಾತಿಯನ್ನ ಮುಸ್ಲೀಂರಿಗೆ ನೀಡುವ ಘೋಷಣೆ ಮಾಡಿ ಸುಳ್ಳು ಹೇಳಿ ಕೇಂದ್ರವೇ ಮೀಸಲಾತಿ ಕೊಟ್ಟಿದೆ ಎಂದು ಕಾಂಗ್ರೆಸ್ ಸಚಿವರು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರದ ಪ್ರಹ್ಲಾದ್ ಜೋಷಿ ಅಂತಹ ಧರ್ಮಾಧಾರಿತ ಯೋಜನೆಗಳು ನಮ್ಮಲ್ಲಿ ಇಲ್ಲ ಎಂದಿದ್ದಾರೆ. ಸುಳ್ಳು ಹೇಳಿಕೊಂಡು ಕಾಂಗ್ರೆಸ್ ನಾಯಕರು ಓಡಾಡುತ್ತಿದ್ದಾರೆ ಎಂದರು.
ಸಂವಿಧಾನ ವಿರೋಧಿ, ಅಂಬೇಡ್ಕರ್ ವಿರೋಧಿ, ಹಿಂದೂಗಳ, ದಲಿತ ಹಿಂದುಳಿದ ವರ್ಗದವರ ವಿರೋಧಿ ರಾಜ್ಯ ಸರ್ಕಾರದ ಈ ಮೀಸಲಾತಿಯನ್ನ ರಾಜ್ಯಪಾಲರು ತಿರಸ್ಕರಿಸಬೇಕು. ರಾಷ್ಟ್ರಭಕ್ತರ ಬಳಗ ಇದರ ಬಗ್ಗೆ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ಕಳುಹಿಸಲಾಗುವುದು.
ಜೂ. ೨೫ ರಂದು ಬುಧವಾರ ಪ್ರತಿಭಟನೆ ನಡೆಸಲಿದೆ ಎಂದ ಈಶ್ವರಪ್ಪ, ಸಚಿವ ಹೆಚ್ ಕೆ ಪಾಟೀಲ್ ಎದೆಗಾರಿಕೆಯನ್ನ ಮೆಚ್ಚುವೆ. 1½ ಲಕ್ಷ ಕೋಟಿ ಗಣಿಗಾರಿಕೆಯಲ್ಲಿ ಲೂಟಿಯಾಗಿದೆ ಎಂದು ಸಿಎಂಗೆ ಪತ್ರ ಬರೆದಿದ್ದಾರೆ. ತೋಳು ಮುರಿದು ಶೆಡ್ಡು ಹೊಡೆದ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯನವರ ಮೌನ ಉತ್ತರ ಕುಮಾರನ ಪೌರುಷ ಎಂದು ಒಪ್ಪಿಕೊಳ್ಳಿ ಎಂದರು.
ಬಿಆರ್ ಪಾಟೀಲ್ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಕಮಿಷನ್ ನೀಡದೆ ಮನೆಹಂಚಿಕೆಯಾಗಲ್ಲ ಎಂದು ಹೇಳಿದ್ದಾರೆ. ಮೂವರು ಸಚಿವರು ಪಾಟೀಲರಿಗೆ ಬೆಂಬಲಿಸಿದ್ದಾರೆ. ಆದರೆ ಡಿಸಿಎಂ ಡಿಕೆಶಿ ಏನೂ ಆಗಿಲ್ಲ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇನ್ನೂ ತನಿಖೆಯಾಗಿಲ್ಲ ಅಷ್ಟರಲ್ಲೇ ಡಿಕೆಶಿ ಹೇಳಿಕೆ ಅಸಹ್ಯ ಎನಿಸುತ್ತಿದೆ ಎಂದರು.
ಸಿಟಿಂಗ್ ಜಡ್ಜ್ ನವರ ನೇತೃತ್ವದಲ್ಲಿ ತನಿಖೆಯಾಗಬೇಕು. ಜಮೀರ್ ಪಾಲೆಷ್ಟು ಎಂಬುದು ಬಹಿಗವಾಗಬೇಕು. ದೇಶದಲ್ಲಿ ಕಾಂಗ್ರೆಸ್ ತುಷ್ಠೀಕರಣದ ಹಿನ್ನಲೆಯಲ್ಲಿ ನಿರ್ನಾಮವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲೂ ನಿರ್ನಾಮವಾಗಲಿದೆ ಎಂದರು.