ಬಿಎಸ್ ವೈ ಮಾಡಿರುವ ಒಳ್ಳೆಗುಣಗಳನ್ನ ಮೈಗೂಡಿಸಿಕೊಳ್ಳಿ ನಿಮಗೂ ಒಳ್ಳೆಯದಾಗುತ್ತದೆ-ಶಾಸಕರು ಹೇಳಿದ್ದು ಯಾರಿಗೆ? Embrace the good qualities that BSY has done

 SUDDILIVE || SHIVAMOGGA

ಬಿಎಸ್ ವೈ ಮಾಡಿರುವ ಒಳ್ಳೆಗುಣಗಳನ್ನ ಮೈಗೂಡಿಸಿಕೊಳ್ಳಿ ನಿಮಗೂ ಒಳ್ಳೆಯದಾಗುತ್ತದೆ-ಶಾಸಕರು ಹೇಳಿದ್ದು ಯಾರಿಗೆ? Embrace the good qualities that BSY has done and it will be good for you too - to whom did the legislators say?

ಸಚಿವ ಜಮೀರ್ ಅಹಮದ್ ರಾಜೀನಾಮೆ ನೀಡಬೇಕು, ಶಿಕ್ಷಣ ಸಚಿವರು ಬಿಎಸ್ ವೈ ಜೈಲಿಗೆ ಹೋದ ವಿಷಯ ಮತ್ತು ಕಾಂಗ್ರೆಸ್ ತುಷ್ಠೀಕರಣ ವಿರುದ್ಧ ಶಾಸಕ ಚೆನ್ನಬಸಪ್ಪ ಮುಗಿಬಿದ್ದಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮೊದಲಿಗೆ ಮಾತನಾಡಿದ ಅವರು, ವಸತಿ ನಿಗಮ ಮತ್ತು ಯೋಜನೆಗಳಲ್ಲಿ ನಡೆದ ಭ್ರಷ್ಠಾಚಾರವನ್ನ ಬಿ.ಆರ್ ಪಾಟೀಲ್ ರವರು ಜಗತ್ತಿಗೆ ತೋರಿಸಿದ್ದರೂ ಸರ್ಕಾರ ಮೌನವಹಿಸಿದೆ ಎಂದು ಆರೋಪಿಸಿದರು.

ಭ್ರಷ್ಠಾಚಾರ ನಡೆದರೂ ಮೌನವಾಗಿದ್ದರೆ ಹೇಗೆ ವಸತಿ ಸಚಿವ ಜಮೀರ್ ರಾಜೀನಾಮೆ ನೀಡಿ ಪಕ್ಷಪಾತ ತನಿಖೆಗೆ ಸಹಕರಿಸಬೇಕು. ಗುತ್ತಿಗೆ ದಾರರು ಹೋದರೆ ವಸತಿ ಯೋಜನೆಯ ಅನುಮತಿ ನೀಡಲಾಗುವುದು ಶಾಸಕರು ಹೋದರೆ ಏನೂ ಬಿಡುಗಡೆಯಿಲ್ಲ ಎಂಬ ಅಳಲನ್ನ ಶಾಸಕ ಬಿ.ಆರ್ ಪಾಟೀಲ್ ಹೇಳಿದ್ದಾರೆ. ತನಿಖೆಯಾಗಬೇಕು ಎಂದು ಆಗ್ರಹಿಸಿದರು. 

ತುಷ್ಠೀಕರಣದ ಹಿನ್ನಲೆಯಲ್ಲಿ ಕಾಂಗ್ರೆಸ್ ಬಟಾಬಯಲಾಗಿದೆ. ಆರ್ಟಿಕಲ್ 370 ತೆಗೆದು ಭಾರತದ ಕಿರೀಟ ಎಂಬುದನ್ನ ಬಿಜೆಪಿ ತೋರಿಸಿದೆ. ವಸತಿಯೋಜನೆಯಲ್ಲಿ ಶೇಖಡ 15 ರಷ್ಟು ಮೀಸಲು ಇಟ್ಟಿರುವುದು ಅಪರಾದದ ಅಪವಾತಾರ ಎಂದರು. 

ಮುಸ್ಲೀಂರಿಗೆ ಅಲ್ಪಸಂಖ್ಯಾತ ಇಲಾಖೆ ಇದ್ದರೂ ವಿಶೇಷ ಏನಿದೆ. ವಸತಿಯೋಜನೆಯಲ್ಲಿ ಮೀಸಲು ಯಾಕೆ ಇದು ತುಷ್ಠೀಕರಣ ಘೋರ ಅಪರಾಧವಾಗಿದೆ. ಬಡವರಿಗೆ ಸೂರು ಎಂದಾದರೆ ಎಲ್ಲರೂ ಬರ್ತಾರೆ. ಇದರಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕೊಡಲಾಗುತ್ತದೆ. ತುಷ್ಠೀಕರಣ ಡೋಂಗೀ ಜಾತ್ಯಾತೀತವನ್ನ ಕಾಂಗ್ರೆಸ್ ಕೈ ಬಿಡಬೇಕು ಎಂದು ಆಗ್ರಹಿಸಿದರು. 

ಬಿಎಸ್ ವೈ ಬಗ್ಗೆ ಈ ಜಿಲ್ಲೆಯ ಮಂತ್ರಿಗಳು ಮಾತನಾಡುತ್ತಾರೆ. ಬಿಎಸ್ ವೈ ಕುರಿತು ಮಾತನಾಡುವಾಗ ಯೋಚಿಸಬೇಕಿತ್ತು. ಬಿಎಸ್ ವೈ ಜೈಲಿಗೆ ಹೋಗಿಲ್ವಾ ಎಂದು ಶಿಕ್ಷಣ ಸಚಿವರು ಕೇಳುತ್ತಾರೆ. ಯಾರು ಕೂಲಿಕಾರ್ಮಿಕರಿದ್ದಾರೆ, ಯಾವ ರೈತನಿಗೆ ಅನ್ಯಾಯವಾದಾಗ ಜೈಲಿಗೆ ಹೋದವರು ಬಿಎಸ್ ವೈ ಇವರ ಪರವಾಗಿ ಹೋರಾಟ ನಡೆಸಿ ಜೈಲಿಗೆ ಹೋದವರು ಯಡಿಯೂರಪ್ಪನವರು. ತುರ್ತು ಪರಿಸ್ಥಿತಿಯ ವೇಳೆ ಪ್ರಜಾಪ್ರಭುತ್ವದ ಪರವಾಗಿ ಹೋರಡಿ ಜೈಲಿಗೆ ಹೋದವರು. ಅವರ ಹೋರಾಟದಿಂದ ಪ್ರಜಾಪ್ರಭುತ್ವ ಉಳಿದಿದೆ ಅದರ ಹಿನ್ನಲೆಯಲ್ಲಿ ನೀವು ಕಾರಿನಲ್ಲಿ ಓಡಾಡುತ್ತಿದ್ದೀರಿ ಎಂದು ಹೇಳಿದರು. 

ದೇಶಕ್ಕೆ ಅಪಮಾನವಾಗುವ ಸಂದರ್ಭದಲ್ಲಿ, ರಾಮ ಮಂದಿರ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿದಾಗ ಜೈಲಿಗೆ ಹೋದವರು ಬಿಎಸ್ ವೈ. ಅವರಿಗೆ ನ್ಯಾಯಾಲಯವೂ ಕ್ಲೀನ್ ಚೀಟ್ ನೀಡಿದ ಮೇಲೂ ಅವರು ಜೈಲಿಗೆ ಹೋದವರು ಎಂದು ತೇಜೋವಧೆ ಮಾಡುತ್ತೀರಾ? ಶಿಕ್ಷ ಸಚಿವರಾಗಿ ನೀವು ಸತ್ಯ ಹೇಳಬೇಕು. ಕಾಗೋಡು ತಿಮ್ಮಪ್ಪನವರೆ ಬಿಎಸ್ ವೈರನ್ನ ಸನ್ಮಾನಿಸಿದ್ದನ್ನ‌ಮರೆಯಬೇಡಿ ಎಂದರು. 

ಬಿಎಸ್ವೈ ನಡೆಸಿದ ಒಳ್ಳೆ ಸಂಗತಿ ಕೈಬಿಡಬೇಡಿ ನಿಮಗೂ ಒಳ್ಳೆಯದಾಗುತ್ತದೆ. ತುಷ್ಠೀಕರಣದ ಹಿನ್ನಲೆಯಲ್ಲಿ ಕಾಂಗ್ರೆಸ್ ನ ವಿರುದ್ಧ ಸದನದ ಒಳಗೆ ಮತ್ತು ಹೊರಗಡೆ ನಡೆಯಲಿದೆ. ತುಷ್ಠೀಕರಣ ನಿಲ್ಲಬೇಕು. ಹಿಂದೂಗಳ ಮೇಲಿನ ದಬ್ಬಾಳಿಕೆ ನಿಲ್ಲಬೇಕು ಎಂದು ಗುಡುಗಿದರು. 

ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದು 11 ವರ್ಷ ತುಂಬಿದ್ದು, ಅದರ ಅಂಗವಾ್ಇ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ ತಿಳಿಸಿದರು.

ವಿಕಸಿತ ಭಾರತದ ಅಮೃತ ಮಹೋತ್ಸವದ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 8 ಮಹಾಶಕ್ತಿಯಲ್ಲಿ ಪರಿಸರ ದಿನಾಚರಣೆ. ಪ್ರತಿಯೊಬ್ಬ ಕಾರ್ಯಕರ್ತ ಸಸಿ ನೆಟ್ಟಿದ್ದು, ಪ್ರತಿಭೂತ್ ನಲ್ಲೂ ವಿಶ್ವ ಯೋಗ ದಿನಾಚರಣೆ, ದೇಶದ ಅಖಂಡತೆಗಾಗಿ 303 ಬೂತ್ ನಲ್ಲೂ ಶ್ಯಾಮ ಪ್ರಕಾಶ್ ಮುಖರ್ಜಿ ಬಲಿದಾನದ ದಿವಸ್ ಆಚರಣೆಯನ್ನ ಜೂ.25 ರಂದು ಹಾಗೂ ತುರ್ತು ಪರಿಸ್ಥಿತಿ ಹೇರಲಾಗಿದ್ದು ಆ ದಿನವನ್ನ ಬಿಜೆಪಿ ಕರಾಳ ದಿನ ಆಚರಿಸಲಾಗುವುದು ಎಂದರು.

ಜೂ.27 ರಂದು ಅಂಬೇಡ್ಕರ್ ಭವನದಲ್ಲಿ ಕರಾಳದಿನಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಭಾಗಿಯಾಗಲಿದ್ದಾರೆ.  ವಿಕಸಿತ ಭಾರತದ ಪರವಾಗಿ  ತುರ್ತು ಪರಿಸ್ಥಿತಿಯ ಕರಾಳ ದಿನದ ಬಗ್ಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ  ಪ್ರಬಂಧ ಸ್ಪರ್ದೆ ಹಮ್ಮಿಕೊಳ್ಳಲಾಗಿದೆ.

Embrace the good qualities that BSY has done

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close