ನಮ್ಮ ಪ್ರಶ್ನೆಗಳಿಗೆ ಉತ್ತರಕೊಡಿ ಠೇಂಕಾರಿಸಬೇಡಿ -ಸಾಹಿತಿ ಜಿ.ಎಸ್ ಸಿದ್ದರಾಮಯ್ಯ -Don't be afraid to answer our questions

 SUDDILIVE || SHIVAMOGGA

 ನಮ್ಮ ಪ್ರಶ್ನೆಗಳಿಗೆ ಉತ್ತರಕೊಡಿ ಠೇಂಕಾರಿಸಬೇಡಿ -ಸಾಹಿತಿ ಜಿ.ಎಸ್ ಸಿದ್ದರಾಮಯ್ಯ -Don't be afraid to answer our questions - Writer G.S. Siddaramaiah

Questiob, answer

ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮಹೇಶ್ ಜೋಷಿಯವರ ವಿರುದ್ಧ ಶಿವಮೊಗ್ಗದ ಕಸಾಪ ಸದಸ್ಯರು ಕಹಳೆಯನ್ನ ಮೊಳಗಿಸಿದ್ದಾರೆ. ಆಯೋಗ ರಚಿಸಿ ಜೋಷಿಯ ವಿರುದ್ಧ ತನಿಖ ನಡೆಸಿ. ತಪ್ಪಿತಸ್ಥ ಎಂದು ಕಂಡು ಬಂದರೆ ಅಮಾನತ್ತಿನಲ್ಲಿರುವ ಅವರನಗನ ವಜಾಗೊಳಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಚುನಾವಣೆ ನಡೆಸಿ ಎಂದು ಹಕ್ಕೋತ್ತಾಯ ಮಾಡಲಾಯಿತು.

ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ವತಿಯಿಂದ ಶಿವಮೊಗ್ಗದ ಡಾ.ಅಂಬೇಡ್ಕರ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ಹೋರಾಟದ ಕನ್ನಡಿಗರ ಜಾಗೃತಿ ಸಮಾವೇಶವನ್ನ ಉದ್ಘಾಟಿಸಿ  ಮಾತನಾಡಿದ  ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಕಸಾಪದ ಬಗ್ಗೆ ಸರ್ಕಾರ ಮತ್ತು ಜನರಿಗೆ ವಿಷಯ ಮುಟ್ಟಿಸಲು ಮಾತನಾಡುವ ಅನಿವಾರ್ಯತೆಯಿದೆ ಎಂದು  ಅಭಿಪ್ರಾಯ ಪಟ್ಟರು.

ಪ್ರಭುತ್ವದಲ್ಲಿ ಅಭಿವ್ಯಕ್ತಿಯ ಸ್ವತಂತ್ರ್ಯ ದೊರಕಿದ್ದು ನಾಲ್ವಡಿ ಕೃಷ್ಣರವರಿಂದ. ಇವರನ್ನ ಗಾಂಧಿಜಿಯವರು ರಾಜ ಋಷಿ ಎಂದು ಕರೆದಿದ್ದರು. ನಾಲ್ವಡಿಯರಿಂದ ಸ್ಥಾಪಿತಗೊಂಡ ಕನ್ನಡ ಸಾಹಿತ್ಯ ಪರಿಷತ್ ಯಾವತ್ತೂ ಅರಮನೆಯ ಗೋಡೆಯಾಗಿ ಬಳಕೆಯಾಗಲಿಲ್ಲ. ಅವರಿಗೆ ಭಾಷೆಯ ಬಳಕೆ ಮತ್ತು ಪರಿಷತ್ ನ ಸೂಕ್ಷ್ಮತೆಗೊತ್ತಿತ್ತು. ಇಡೀ ಪರಿಷತ್ ನ ಇತಿಹಾಸದಲ್ಲಿ ಮಹೇಶ್ ಜೋಷಿ ಅಧ್ಯಕ್ಷರಾದಾಗ ಇದ್ದ ದುಷ್ಕರಣೆ ಸ್ಥಿತಿ ಯಾವತ್ತೂ ಬಂದಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷದಲ್ಲಿನ ರಾಜಕರಣದಂತೆ ಕಸಪದ ಚುನಾವಣೆಯನ್ನ ಬಳಸಿಕೊಂಡ ವ್ಯಕ್ತಿಯನ್ನ ನಾವು ವಿರೋಧಿಸಿದ್ವಿ. ವ್ಯಕ್ತಿಯನ್ನ ಯಾವತ್ತೂ ವಿರೋಧಿಸಿರಲಿಲ್ಲ.  ಪರಿಷತ್ ನ ರಾಜ್ಯಾಧ್ಯಕ್ಷರು ಸರ್ವಾಧಿಕಾರದ ಧೋರಣೆ ಹೊಂದಿದ್ದಾರೆ. ಅದನ್ನ ನಾವೆಲ್ಲ ವಿರೋಧಿಸಿದ್ವಿ. ಪ್ರಜಾಪ್ರಭುತ್ವದ ವಿಕೇಂದ್ರಿಕರಣದ ನೀತಿಗಳನ್ನ ವಿರೋಧಿಸಿ ಕೇಂದ್ರೀಕೃತಗೊಳಿಸವ ಇವರ ನಡಾವಳಿಕೆಯನ್ನ ಒಪ್ಪಲಾಗದು ಎಂದರು.

ಶಿವಮೊಗ್ಗದ ಕಸಾಪದ ಅಧ್ಯಕ್ಷರ ಅಧಿಕಾರವನ್ನ‌ಕಿತ್ತುಹಾಕಲು ನನಗೆ ಕೊಡಬೇಕು ಎಂಬ ಜೋಷಿಯವರ ಧೋರಣೆ ಸಹಿಸಲಾಗದು. ಇದು ದುರಂಕಾರದ ನಡವಳಿಕೆಯಾಗಿದೆ. ನಮ್ಮ ಹೋರಾಟ ಹಿಂಸಾತ್ಮಕವಾದುದ್ದಲ್ಲ. ಗಾಂಧೀಜಿಯ ಅಹಿಂಸೆಯ ಹೋರಾಟವಾದುದ್ದು, ಸತ್ಯಕ್ಕಾಗಿ ಆಗ್ರಹವಿದೆ. ನಮ್ಮ ಪ್ರಶ್ನೆಗಳಿಗೆ ಉತ್ತರಕೊಡಿ ಟೇಂಕಾರದಿಂದ ಮೆರೆಯಬೇಡಿ ಎಂದು ಗುಡುಗಿದರು. 

ದುರಂಕಾರದ ಜೊತೆ ದುರಾಡಳಿತ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಹಕಾರಿ ಇಲಾಖೆಯವರು ಜೋಶಿಯವರಿಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಕೊಡಿ. ಪ್ರಶ್ನಿಸಿದವರನ್ನ‌ ನ್ಯಾಯಾಲಯದ ಮೆಟ್ಟೆಲು ಹತ್ತಿಸುವುದು ದುರಾಡಳಿತದ ಪರಮಾವಧಿಯಾಗಿದೆ. ಸರ್ಕಾರ ಈ ವ್ಯಕ್ತಿಯ ಬಗ್ಗೆ ಸುಮ್ಮನಿರಬಾರದು. ಆಯೋಗವನ್ನ ರಚಿಸಿ ಕಸಾಪದ ಸದಸ್ಯರು ಎತ್ತಿರುವ ಪ್ರಶ್ನಿಗಳಿಗೆ ಆಯೋಗದಲ್ಲಿ ಉತ್ತರ ಸಿಗಲಿ. ಅಮಾನತ್ತು ಗೊಳಿಸಿದ ವ್ಯಕ್ತಿಯಿಂದ ಸೂಕ್ತ ಉತ್ತರ ಬಾರದಿದ್ದರೆ ವಜಾಗೊಳಿಸುವಂತೆ ಸರ್ಕಾರದ ಮುಂದೆ ಹೇಳಿದರು. 

ಕನ್ನಡ ಶಾಲೆಗಳ ಉದ್ದಾರಕ್ಕೆ ಹಣ ಬಳಕೆಯಾಗಲಿ. ಐದು ಆರು ಕೋಟಿ ಅನುದಾನದಲ್ಲಿ ಕಸಾಪದ ಸಭೆ ಸಮಾರಂಭ ನಡೆಯಲಿ ಇದನ್ನ 30 ಕೋಟಿಗೆ ಏರಿಕೆಯಾಗದಂತೆ ನೋಡಿಕೊಳ್ಳಬೇಕು. ಕಸಪ ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ನೀಡುವುದು  ಗೌರವ ಅಲ್ಲ. ಸ್ವಯತ್ತ ಶಕ್ತಿಯನ್ನ ಕಳೆದುಕೊಳ್ಳುವುದಕ್ಕೆ ದಿಕ್ಕಾಗುತ್ತದೆ. ಅದಕ್ಕಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಾಗ ಕಿತ್ತು ಕೊಂಡದೆ. ಪರಿಷತ್ ನ ಘನತೆಯನ್ನ ಮತ್ತು ಮಾನವನ್ನ ಸರ್ಕಾರವೇ ಕಾಪಾಡಿದೆ ಎಂದರು. 

ನಙತರ ಮಾತನಾಡಿದ ಸಾಹಿತಿ ಸಾಹಿತಿ ಬಂಜಗೆರೆ ಜಯಪ್ರಕಾಶ್ ಕಸಾಪ ಸ್ವಾಯತ್ತೆ ಸಂಸ್ಥೆಯಾಗಿದೆ. ಸರ್ಕಾರ ಇಂತಹ ಸ್ವಾಯತ್ತತೆ ಸಂಸ್ಥೆಯಲ್ಲಿ ಮೂಗು ತೂರಿಸಿದರೆ ಏನಾಗಲಿದೆ ಎಂಬುದಕ್ಕೆ ಮಹೇಶ್ ಜೋಷಿಯ ಪ್ರಕರಣ ಉದಾಹರಣೆಯಾಗಲಿದೆ ಎಂದು  ಅಭಿಪ್ರಾಯಟ್ಟರು. 

 ಜೋಷಿ ತರಲು ಹೊರಟಿರುವ ತಿದ್ದುಪಡಿಗಳು ಮೂಲ ಸಾಹಿತ್ಯ ಪರಿಷತ್ ಗೆ ಕುಂದು ತರುವಂತಹದ್ದಗಿತ್ತು. ಇದಕ್ಕೆ ವಿರೋಧವಿದೆ. ಕೇಂದ್ರ ಸಾಹಿತ್ಯದಲ್ಲಿದಲ್ಲಿದ್ದ ಜೋಷಿ ವಿರುದ್ಧ ಭ್ರಷ್ಠಾಚಾರದ ಆರೋಪವಿದೆ. ಆ ವಿಷಯ ಈಗ ಬೇಡ,  ಜಿಲ್ಲಾಧ್ಯಕ್ಷರಿಗೆ ಸಮನಾದ ಅಧಿಕಾರವಿದ್ದರೆ ಅದನ್ನ‌ಬೈಲಾ ತಿದ್ದುಪಡಿ ಮೂಲಕ ಹೊರಟಿರುವ ಜೋಷಿಯ ನಡೆಯನ್ನ ವಿರೋಧಿಸಬೇಕಿದೆ ಎಂದರು. 

ಒಬ್ಬ ಚುನಾಯಿತ ಪ್ರತಿನಿಧಿಯನ್ನ ಮತ್ತೊಬ್ಬ ಚುನಾಯಿತ ಪ್ರತಿನಿಧಿ ಏಕಾಏಕಿ ಕೆಳಗಿಳಿಸಲು ನೀತಿ ನಿಯಮಗಳಿರುತ್ತದೆ. ಇಡೀ ಕಾರ್ಯಕಾರಿ ಸಮಿತಿ ಎದುರು ಜಿಲ್ಲಾಧ್ಯಕ್ಷರಿಂದ ತಪ್ಪಾಗಿದೆ ಎಂದು ವಿಷಯ ಪ್ರಸ್ತಾಪಿಸಬೇಕು. ಚರ್ಚೆಯಾಗಬೇಕು. ಆತನ ತಪ್ಪುಗಳನ್ನ ದಾಖಲೆ ಸಹಿತ ಮಂಡಿಸಬೇಕು. ಆದರೆ ತನ್ನ‌ಕೆಳಗಿನ ಜನಪ್ರತಿನಿಧಿಯನ್ನ ತೆಗೆದುಹಾಕುವ ಆತುರದಲ್ಲಿ ಬೈಲಾಗೆ ತಿದ್ದುಪಡಿಗಳನ್ನ ತಂದು ದುರ್ಬಲಗೊಳಿಸಬಾರದು. ಅಜೀವ ಸದಸ್ಯರನ್ನೂ ವಜಾಗೊಳಿಸುವ ಅಧಿಕಾರವನ್ನ ಮಹೇಶ್ ಜೋಷಿ ಹೊಂದಲು ಹೊರಟಿದ್ದಾರೆ. ಕಸಾಪ ಖಾಸಗಿ ಸಂಸ್ಥೆಯಲ್ಲ. ಇದು ಕನ್ನಡಿಗರ ಮಾಲಿಕತ್ವದ ಸಂಸ್ಥೆ ಎಂದು ಜ್ಞಾಪಿಸಿದರು. 

ಅವರಿಗೆ ನೀಡಿದ ಸಚಿವ ಸ್ಥಾನಮಾನ ತೆಗೆಯುವ ಮೂಲಕ ಸರ್ಕಾರ ತನ್ನ ಜವಬ್ದಾರಿ ಮೆರೆದಿದೆ. ವಿವೇಕ ಏನೆಂಬುದು ಗೊತ್ತಿಲ್ಲದ ಜೋಷಿಗೆ ಕನ್ನಡ ಹೋರಾಟವೇ ಗೊತ್ತಿಲ್ಲ. ಅದಕ್ಕೆ ಗೌರವಯುವವಾಗಿ ನಡೆದುಕೊಂಡಿದ್ದರೆ ಸದಸ್ಯರೇ ಅವರಿಗೆ ಸಚಿವ ಸ್ಥಾನಮಾನ ನೀಡುತ್ತಿದ್ದರು. ಮುಂದಿನ ಚುನಾವಣೆಯಲ್ಲಿ ಯಾರನ್ನ ತರಬೇಕೆಂದು ಯೋಚಿಸಿ ನಂತರ ಆಯ್ಕೆಮಾಡಿ ಎಂದ ಅವರು ಕಸಾಪ ರಾಜ್ಯಾಧ್ಯಕ್ಷರನ್ನ ನಿಯಂತ್ರಿಸಿ ಎಂದು ಕೋರಿದರು. 

ದಿಕ್ಸೂಚಿ ಭಾಷಣವನ್ನ ಮಂಡ್ಯ ಜಿಲ್ಲೆಯ ಕಸಾಪ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ನಡೆಸಿದರು. ಪ್ರಸ್ತಾವಿಕ ಭಾಷಣವನ್ನ ಪ್ರೊ.ಕೃಷ್ಣಮೂರ್ತಿ ಮಾಡಿದರು. 

Don't be afraid to answer our questions

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close