SUDDILIVE || SHIVAMOGGA
ಅರಣ್ಯ ಇಲಾಖೆಯ ಇಬ್ಬುಗೆತನ ಬಯಲು-Forest Department's hypocrisy exposed
ಕೊನೆಗೂ ಅರಣ್ಯ ಇಲಾಖೆ ನಿದ್ದೆಯಿಂದ ಜಾಗೃತಗೊಂಡಿದೆ. ಅರಣ್ಯ ಇಲಾಖೆಯ ಡಿಆರ್ ಎಫ್ ಒ ಸ್ಥಳಕ್ಕೆ ಧಾವಿಸಿ ಮರ ಕಡಿದ ಜಾಗದಲ್ಲಿ ಸಸಿ ನೆಟ್ಟು ಬಂದಿದ್ದಾರೆ. ಮರ ಕಡಿಯುವ ಮುಂಚೆ ಎಚ್ಚೆತ್ತುಕೊಳ್ಳದ ಇಲಾಖೆ ಮರಕಡಿದ ಮೇಲೆ ಕುಂಭಕರ್ಣ ನಿದ್ರೆಯಿಂದ ಮೈಕೊಡವಿ ನಿಂತರೂ ಮರಕಡಿದವರ ವಿರುದ್ಧ ಏನು ಕ್ರಮ ಎಂಬ ಪ್ರಶ್ನಿಯನ್ನ ಪ್ರಶ್ನೆಯಾಗಿಯೇ ಉಳಿಸಿದೆ.
ಶಂಕರಮಠವೃತ್ತದಲ್ಲಿ ಎರಡು ದಿನ ಹಿಂದೆ ಎಲ್ ಇಡಿ ಸ್ಕ್ರೀನ್ ಅಳವಡಿಸಲು ರಾತ್ರಿಯ ವೇಳೆ ಅನುಮತಿಯಿಲ್ಲದೆ ಮರಕಡಿಯಲಾಗಿದೆ ಎಂದು ಆರೋಪಿಸಿ ಕೆಲ ಸ್ಥಳೀಯರು ಎಲ್ ಇಡಿ ಅಳವಡಿಸಿದ ಗುತ್ತಿಗೆದಾರನ ಬಳಿ ಜಗಳವಾಡಿದ್ದರು. ಎಲ್ ಇಡಿ ಸ್ಕ್ರೀನ್ ಅಳವಡಿಕೆಗೂ ಅನುಮತಿ ಇಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು.
ಕೋಟೆ ಠಾಣೆಯಲ್ಲಿ ಎಲ್ ಇಡಿ ಸ್ಕ್ರೀನ್ ಅಳವಡಿಕೆಗೆ ಊಕ್ತ ದಾಖಲಾತಿಯನ್ನ ಗುತ್ತಿಗೆದಾರನ ಬಳಿ ನಿನ್ನೆ ಕೇಳಲಾಗಿತ್ತು. ಸ್ಥಳದಲ್ಲಿ ಸೂಕ್ತ ದಾಖಲಾತಿ ನೀಡದೆ ಹೊರ ಹೋದ ವ್ಯಕ್ತಿ ಇದು ವರೆಗೂ ಠಾಣೆಗೆ ಬಂದಿಲ್ಲ ಎಂಬ ಮಾಹಿತಿ ಸುದ್ದಿಲೈವ್ ಗೆ ತಿಳಿದು ಬಂದಿದೆ.
ಒಟ್ಟಿನಲ್ಲಿ ಗುತ್ತಿಗೆದಾರ ಸ್ಥಳದಲ್ಲಿ ಸೂಕ್ತ ದಾಖಲಾತಿ ಇಲ್ಲದೆ ಕೆಲಸ ಮಾಡಿದಂತೂ ಸತ್ಯವಾಗಿದೆ. ಅರಣ್ಯ ಇಲಾಖೆ ಮರಕಡಿದ ಮೇಕೆ ಮೈಕೊಡವಿ ನಿಂತಿದೆ. ಸಸಿ ನೆಡುವ ಮೊದಲು ಎಚ್ಚೆತ್ತುಕೊಂಡಿದ್ದರೆ ಮರ ಉಳಿಯುತ್ತಿತ್ತು. ಚರ್ಚ್ ಎದುರು ನಡೆದ ಘಟನೆಯಿಂದ ಇಲಾಖೆ ಯಾವ ಪಾಠವನ್ನೂ ಕಲಿತಿಲ್ಲ. ದೂರು ದಾಖಲಿಸಿಕೊಳ್ಳದಿರುವುದು ಇಲಾಖೆಯ ಇಬ್ಬುಗೆತನ ಪ್ರದರ್ಶನವಾಗುತ್ತಿದೆ.
Forest Department's hypocrisy exposed