SUDDILIVE || SHIVAMOGGA
ತುರ್ತು ಪರಿಸ್ಥಿತಿಯ ಕರಾಳೆತೆಯನ್ನ ಬಿಚ್ಚಿಟ್ಟ ಬಿಜೆಪಿಯ ಸುರೇಶ್ ಕುಮಾರ್-BJP's Suresh Kumar exposes the brutality of the Emergency
ಅಂದು ಗರೀಬಿ ಹಠಾವೋಕ್ಕೆ ಜನ ಮಾರು ಹೋದರೆ ಇಂದು ಗ್ಯಾರಂಟಿಗಳಿಗೆ ಮಾರು ಹೋಗಿದ್ದಾರೆ. ಪರಿಸ್ಥಿತಿ ಆಗಲೂ ಬದಲಾಗಲಿಲ್ಲ. ಈಗಲೂ ಆಗಿಲ್ಲ ಎಂದು ಮಾಜಿ ಸಚಿವ ಹಾಗು ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ ಬಣ್ಣಿಸಿದರು.
ನಗರ ಬಿಜೆಪಿ ವತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸ ೫೦ ವರ್ಷ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಇಂತಹ ಕರಾಳ ಇತಿಹಾಸ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡೇ ಬರಲಾಗಿದೆ ಎಂದು ಹೇಳಿದರು.
ಐವತ್ತು ವರ್ಷಗಳ ಹಿಂದೆ ದೇಶದಲ್ಲಿ ನಡೆದ ಕರಾಳ ಘಟನೆಯ ನೆನಪು ಇಂದೇಕೆ ಎಂದು ಅನೇಕರು ಕೇಳಬಹುದು. ಆದರೆ ಇತಿಹಾಸ ಗೊತ್ತಿಲ್ಲದವನು ಇತಿಹಾಸ ಸೃಷ್ಟಿಸಲಾರ ಎಂಬ ಮಾತಿದೆ. ಹೀಗಾಗಿ ದೇಶದಲ್ಲಿ ನಡೆದ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ನೆನಪಿಸಿಕೊಳ್ಳಬೇಕಿದೆ. ಅದು ಏಕೆ ಹೇರಿಕೆಯಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದರು.
ಇಸ್ರೇಲ್ನಂತಹ ಪುಟ್ಟ ರಾಷ್ಟ್ರ ಇಂದು ಜಗತ್ತಿನ ಗಮನ ಸೆಳೆಯುತ್ತಿದೆ. ತನಗೆ ಆದ ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದೆ. ಅಂದು ಯಹೂದಿಗಳಿಗೆ ಹಿಟ್ಲರ್ ನೀಡಿದ ಚಿತ್ರ ಹಿಂಸೆಯನ್ನು ಇಸ್ರೇಲಿಗರೂ ಇಂದಿಗೂ ಮರೆತಿಲ್ಲ. ಅಂತಹ ಅವಮಾನ ಹಾಗೂ ನೋವಿನ ವಿರುದ್ಧ ಇಂದಿಗೂ ಹೋರಾಟ ಮಾಡುತ್ತಿದ್ದಾರೆ. ಅವರು ಇತಿಹಾಸ ತಿಳಿದುಕೊಂಡ ಪರಿಣಾಮವಾಗಿ ಹೋರಾಟ ನಡೆಯುತ್ತಿದೆ ಎಂದರು.
ಇಂದಿರಾಗಾಂಧಿ ಪ್ರಧಾನಿಯಾದಾಗಿನಿಂದ ಎಷ್ಟು ವೇಗವಾಗಿ ಜನಪ್ರಿಯತೆ ಹೆಚ್ಚಿತ್ತೋ ಅಷ್ಟೇ ವೇಗವಾಗಿ ಅವರ ಜನಪ್ರಿಯತೆ ೧೯೭೩ ರಿಂದ ಕುಸಿಯಲಾರಂಬಿಸಿತು. ಅವರ ಮಾಡಿದ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಪರಿಣಾಮಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ತೀರ್ಪು ನೀಡಿತ್ತು ಎಂದರು.
ಇದರಿಂದಾಗಿ ಇಂದಿರಾಗಾಂಧಿ ಸರ್ವಾಧಿಕಾರಿ ಧೋರಣೆ ಅನುಸರಿಸಿ ೧೯೭೫ ರ ಜೂನ್ ೨೫ ರಂದು ಮಧ್ಯರಾತ್ರಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಪತ್ರಿಕೆಗಳು ಸುದ್ದಿ ಮಾಡದಂತೆ ಆದೇಶಿಸಲಾಗಿತ್ತು. ಸುದ್ದಿ ಮಾಡಿದವರನ್ನು ಬಂಧಿಸಲಾಗಿತ್ತು. ಹೋರಾಟಗಾರರನ್ನು ಜೈಲಿಗೆ ಹಾಕಲಾಗಿತ್ತು. ಆಲ್ ಇಂಡಿಯಾ ರೇಡಿಯೋ ಆಲ್ ಇಂದಿರಾ ರೇಡಿಯೋ ಆಗಿ ಮಾರ್ಪಟ್ಟು ಇಂದಿರಾಗಾಂಧಿ ಪರವಾದ ಸುದ್ದಿಗಳನ್ನೇ ಬಿತ್ತರಿಸುತ್ತಿತ್ತು ಎಂದರು.
ಯಾವುದೇ ಅಧಿಕಾರ ಇರದ ಇಂದಿಗಾಂಧಿ ಪುತ್ರ ಸಂಜಯ್ ಗಾಂಧಿ ಹೇಳಿದಂತೆ ಇಡೀ ಸರ್ಕಾರ ಕೇಳುತಿತ್ತು. ಆತ ಪುರುಷರನ್ನು ಕುರಿಗಳನ್ನು ಹಿಡಿಸಿದಂತೆ ಹಿಡಿಸಿ ಸುಮಾರು ೧೦ ಲಕ್ಷ ಪುರುಷರಿಗೆ ವ್ಯಾಸೆಕ್ಟಮಿ ಮಾಡಿಸಿದ್ದ. ಜೈಲಿಗೆ ಹಾಕಿದವರ ಉಗುರನ್ನು ಇಕ್ಕಳ ಹಾಕಿಕಿತ್ತು ಹಾಕಿಸಿ ಚಿತ್ರ ಹಿಂಸೆ ನೀಡಿದ್ದ. ಇಂತಹ ಘಟನೆಗಳನ್ನು ನೆನಪಿಸುವುದು ಇಂದು ಅನಿವಾರ್ಯವಾಗಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಮಾಜಿ ಶಾಸಕರಾದ ಎಂಎಲ್ಸಿ ಎಸ್. ರುದ್ರೇಗೌಡ, ಡಾ.ಶಿವಯೋಗಿ ಸ್ವಾಮಿ, ಕೆ.ಜಿ. ಕುಮಾರಸ್ವಾಮಿ, ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್. ದತ್ತಾತ್ರಿ, ನಗರಾಧ್ಯಕ್ಷ ಮೋಹನ ರೆಡ್ಡಿ ಮತ್ತಿತರರು ಇದ್ದರು.
Suresh Kumar exposes the brutality of the Emergency