SUDDILIVE || SHIVAMOGGA || HOLEHONNURU
ಚಿನ್ನಾಭರಣ ಕಳುವು, ಗಾಂಧಿ ಬಜಾರ್ ನಲ್ಲಿ ಸೊಪ್ಪು ಮಾರುತ್ತಿದ್ದವ ನಾಪತ್ತೆ-Gold jewellery stolen, greens seller goes missing in Gandhi Bazaar
ಚಿನ್ನಾಭರಣ ರಿಪೇರಿ ಮಾಡಿಸಲು ಬಂದ ಮಹಿಳೆಗೆ ಶಾಕ್ ಆಗಿದೆ ಎಡೆಹಳ್ಳಿ ಬಸ್ಸಲ್ಲಿ ಬಂದ ಮಹಿಳೆ ಸುಮಾರು 33 ಗ್ರಾಂ 11 ಮಿಲಿ ಚಿನ್ನಾಭರಣವನ್ನ ಕರೆದುಕೊಂಡಿದ್ದಾರೆ.
ಎಡೇಹಳ್ಳಿ ನಿವಾಸಿ ರಮಲಮ್ಮ 2014 ನೇ ಇಸವಿಯಲ್ಲಿ ಖರೀದಿಸಿದ್ದ ಚಿನ್ನಾಭರಣದ ಒಂದು ಭಾಗ ತುಂಡಾಗಿತ್ತು. ಮೇ.30 ರಂದು ಮಧ್ಯಾಹ್ನ 2-30 ಕ್ಕೆ ತನ್ನ ಗ್ರಾಮದಿಂದ ಹೊಳೆಹೊನ್ನೂರಿಗೆ ಬಂದು ಚಿನ್ನಾಭರಣ ರಿಪೇರಿ ಮಾಡುವ ಅಂಗಡಿಗೆ ತೆರಳಿ ರಿಪೇರಿ ಮಾಡಿಸಲು ಬ್ಯಾಗ್ ತೆಗೆದಾಗ ಬ್ಯಾಗ್ ನಲ್ಲಿದ್ದ ಬಂಗಾರದ ಆಭರಣ ಕಳುವಾಗಿತ್ತು.
ಮತ್ತೆ ಮನೆಗೆ ತೆರಳಿ ಹುಡುಕಾಡಿದ ಮಹಿಳೆಗೆ ಎಲ್ಲಾ ಸಿಗದ ಹಿನ್ನಲೆಯಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಪತ್ತೆ
ನ್ಯಾಮತಿ ತಾಲೂಕಿನ ಚಟ್ನಹಳ್ಳಿಯಿಂದ ಬಂದು ಗಾಂಧಿಬಜಾರ್ ನಲ್ಲಿ ಸೊಪ್ಪು ಮಾರುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಜಯಪ್ಪ ಎಂಬ 60 ವರ್ಷದ ವ್ಯಕ್ತಿ ಮೇ.21 ರಿಂದ ಕಾಣೆಯಾಗಿದ್ದು, ಈ ಕುರಿತು ಆತನ ಪತ್ನಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆಯೂ ಎರಡು ಬಾರಿ ಜಯಪ್ಪ ದಿಡೀರ್ ಎಂದು ಕಣೆಯಾಗಿದ್ದು ವಾಪಾಸಾಗಿದ್ದರು. ಈ ಬಾರಿ ನಾಪತ್ತೆಯಾಗಿ ಅನೇಕ ದಿನಗಳು ಕಳೆದಿದ್ದು, ಜಯಪ್ಪ ವಾಪಾಸ್ ಬಾರದ ಹಿನ್ನಲೆಯಲ್ಲಿ ದೂರು ದಾಖಲಾಗಿದೆ.