SUDDILIVE || BHADRAVATHI
ಗ್ರಾಪಂನ ವ್ಯಾಪ್ತಿಯಲ್ಲಿ ಹಲವು ಬೇಡಿಕೆ ಇಟ್ಟುಕೊಂಡು ನಡೆಸುತ್ತಿದ್ದ ಕರವೇ ಶಿವರಾಮೇಗೌಡರ ಬಣದ 10 ದಿನಗಳ ಪ್ರತಿಭಟನೆ ಅಂತ್ಯ-Karave PROTEST ENDS
ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಲವು ಅಕ್ರಮಗಳನ್ನು ವಿರೋಧಿಸಿ, ದಿನಾಂಕ 20/5/2025 ಮಂಗಳವಾರ ದಿಂದ ಅನಿರ್ದಿಷ್ಟವಾದಿ ಉಪವಾಸ ಸತ್ಯಾಗ್ರಹ ಹಾಗೂ 21/5/2025 ರಿಂದ ಅಮರಣಾಂತಿಕ ಉಪವಾಸ ಸತ್ಯಾಗ್ರಹ ಪ್ರತಿಭಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದವತಿಯಿಂದ ನಡೆಸಲಾಗುತ್ತಿತ್ತು.
ಸಿಂಗನಮನೆ ಗ್ರಾಮ ಪಂಚಾಯಿತಿಯಾಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಪಿ ಡಿ ಓ, ಸೋಮಶೇಖರ್ ಹಾಗೂ ಶೇಖರ್ ನಾಯಕ್ ರವರು ಮಾಡಿರುವ ಅಕ್ರಮಗಳನ್ನು ವಿರೋಧಿಸಿ ಅಧಿಕಾರಿಗಳನ್ನು ಹಾಗೂ ಅಕ್ರಮವಾಗಿ ಎರೆಡೇರೆಡು ಮಾಸಿಕ ಸಾಮಾನ್ಯ ಸಬಾ ನಡವಳಿ 2018 ದಾಖಲೆ ಗಳನ್ನು 2017 ಎಂದು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ 2017 ಹಾಗೂ 2018 ಎಂದು ಸುಳ್ಳು ದಾಖಲೆ ಸೃಷ್ಟಿಸಿ ಕೆಲಸ ಮಾಡುತ್ತಿದ್ದ ಹೆಚ್ಚುವರಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಾದ ಸೋಮಶೇಖರ್ ಮತ್ತು ಶೇಖರ್ ನಾಯಕ್ ರವರನ್ನು ಸೇವೆಯಿಂದ ವಜಾಮಾಡುವಂತೆ ಪ್ರತಿಭಾಟನಕರಾರು ವತ್ತಾಯಿಸಿದ್ದರು.
ಅದರಂತೆ ಹೆಚ್ಚುವರಿ ಸಿಬಂದಿಗಳನ್ನು ಸೇವೆಯಿಂದ ವಜಾ ಮಾಡಲಾಗಾಗಿದೆ. ಇನ್ನುಳಿದ ಸರ್ಕಾರಿ ನಿವೇಶನ ಮಾರಾಟದ ಬಗ್ಗೆ ತನಿಖೆ ನಡೆಸುವುದಾಗಿ, ಹಾಗೂ ಖಾಸಗಿ ಲೇಔಟ್ ಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಪಂಚಾಯಿತಿ ಕಛೇರಿಗೆ ಬಿಡಬೇಕಾದ ಖಾಲಿ ನಿವೇಶನವನ್ನು ಬಿಡದೆ ಇರುವ ಬಗ್ಗೆ ಹಾಗೂ ಸರ್ಕಾರಿ ಗ್ರಾಮಠಾಣ ವತ್ತುವರಿಮಾಡಿ ಲೇವುಟ್ ಮಾಡಿರುವುದಕ್ಕೆ ತಹಶೀಲ್ದಾರ್ ಹಾಗೂ ಎಡಿಎಲ್ ಆರ್, ರವರಿಂದ ಅಳತೆ ನಡೆಸಿ ಜಾಗವನ್ನು ವಾಪಾಸ್ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಸರ್ವೆ ಕಾರ್ಯ ಮಾಡುವವರೆಗೂ ಪ್ರತಿಭಟನಾಕರರ ಮನಹೋಲಿಸಿ ಅಧಿಕಾರಿಗಳು ತಿಂಗಳ ಸಮಯವನ್ನು ತೆಗೆದುಕೊಂಡಿದ್ದಾರೆ, ಎಂದು ತಿಳಿದು ಬಂದಿದೆ. ಇವರ ಹೋರಾಟಕ್ಕೆ ಅಧಿಕಾರಿಗಳಿಂದ ತನಿಖೆ ನಡೆಸಿ ಸರಿಯಾದ ನ್ಯಾಯ ಸಿಗುವುದೆ ಎಂದು ಸಾರ್ವಜನಿಕರಲ್ಲಿ ಬಹಳಷ್ಟು ಚರ್ಚೆಯಗುತ್ತಿದೆ.
ಪ್ರತಿಭಟನಾಕರರ ಅಗಲು ರಾತ್ರಿ ಹತ್ತು ದಿನಗಳ ಹೋರಾಟ ಅಂತ್ಯ, ಸರಿಯಾದ ನ್ಯಾಯ ಸಿಗದಿದ್ದರೆ ಜೂಲೈ 10 ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ಪಿಡಿಒ, ಹಾಗೂ ತಾಲ್ಲೂಕು ಪಂಚಾಯತ್ ಕಛೇರಿ ಮತ್ತು ಜಿಲ್ಲಾಪಂಚಾಯತ್ ಕಛೇರಿ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಕಛೇರಿಯಲ್ಲಿ ದೂರು ನೀಡಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನಿಡಿದ್ದಾರೆ.
Karave PROTEST ENDS