SUDDILIVE || SHIVAMOGGA
ಜೂನ್ ತಿಂಗಳಲ್ಲಿ ಗೋತ್ಯೆಯಾಗದಂತೆ ಕಠಿಣ ಕಾನೂನು ಕ್ರಮಕ್ಕೆ ವಿಹೆಚ್ ಪಿ ಬಜರಂಗದಳ ಆಗ್ರಹ-VHP Bajrang Dal demands strict legal action to prevent cow slaughting in June Month
ಗೋವುಗಳನ್ನು ಹತ್ಯೆ ಮಾಡದಂತೆ ಕ್ರಮ ಜರುಗಿಸಲು ವಿಶ್ವ ಹಿಂದೂ ಪರಿಷತ್ ಹಾಗು ಬಜರಂಗದಳ ಜಿಲ್ಲಾ ಘಟಕ ಇಂದು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು
ರಾಜ್ಯದಲ್ಲಿ ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಜಾರಿಯಲ್ಲಿದೆ. ಇದರಂತೆ ಯಾವುದೇ ವಯಸ್ಸಿನ ದನ, ಹೋರಿ, ಕರುಗಳನ್ನು ಯಾವುದೇ ರೀತಿಯಲ್ಲಿ ಕೊಲ್ಲುವುದನ್ನು ನಿಷೇಧಿಸಲಾಗಿದೆ ಅಂದರೆ ಗೋವುಗಳ ವಧೆ ಮಾಡುವುದನ್ನೂ ಬಲಿ ಕೊಡುವುದನ್ನೂ ನಿಷೇಧಿಸಲಾಗಿದೆ.
2025ರ ಜೂನ್ ಮೊದಲ ವಾರದಲ್ಲಿ ಬಹಳಷ್ಟು ಗೋವು ವಧೆ, ಬಲಿ ಕೊಡುವ ಸಂಭವ ಇರುವುದರಿಂದ ಯಾವುದೇ ಕಾರಣಕ್ಕೆ ಜಿಲ್ಲೆಯಲ್ಲಿ ಗೋವಿನ ವಧೆ/ಬಲಿ ಕೊಡದಂತೆ ಕಾನೂನನ್ನು ಹಾಗೂ ಅದರ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಆಗುವಂತೆ ಕ್ರಮ ಕೈಗೊಳ್ಳ ಬೇಕು.
ಅದೇ ರೀತಿ ಹಿಂಸಾತ್ಮಕ ಗೋಸಾಗಾಟ ಆಗದಂತೆ ಇರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ (ಜಾನುವಾರು ಸಾಗಾಟ) ನಿಯಮವಳ 2021 ಜಾರಿಯಲ್ಲಿದ್ದು ಅದನ್ನು ಕೂಡಾ ಕಟ್ಟು ನಿಟ್ಟಾಗಿ ಜಾರಿ ಮಾಡಲು ಕ್ರಮಕೈಗೊಳ್ಳ ಬೇಕು. ಹೀಗೆ ಕಾಯಿದೆ ಮತ್ತು ನಿಯಮಾವಳಿ ಜಾರಿಗೆ ತರಲು ಆಯ ಕಟ್ಟಿನ ಸ್ಥಳಗಳಲ್ಲಿ 24 ಗಂಟೆ ನಾಕಾ ಬಂದಿ ಹಾಕ ಬೇಕು.
ಈಗಾಗಲೇ ಅಕ್ರಮ ಕಸಯಿಖಾನೆ ಬಗ್ಗೆ ಪ್ರಕರಣ ದಾಖಲಾಗಿರುವ ಮತ್ತು ವಧೆ /ಬಲಿ ಆಗುವ ಸಂಭಾವ್ಯ ಸ್ಥಳಗಳನ್ನು ಪೊಲೀಸ್ ನಿಗಾ ವಹಿಸಿ ಅಲ್ಲಿ ಅಪರಾಧ ಆಗದಂತೆ ನೋಡಿಕೊಳ್ಳಬೇಕು. ಕಾಯಿದೆ ಉಲ್ಲಂಘಿಸುವ ಸಾಧ್ಯತೆಯಿದ್ದು, ಗೋಹತ್ಯೆ ಪ್ರಕರಣಗಳಲ್ಲಿ ಜಾಮೀನಿನಲ್ಲಿ ಹೊರಗಿರುವವರನ್ನು ಕರೆಸಿ ಎಚ್ಚರಿಕೆ ಕೊಡಬೇಕು. ಕಾಯಿದೆ ಕಾರ್ಯಗತ ಗೊಳಿಸಲು ವಿಶೇಷ ಸ್ಕ್ವಾಡ್ ರಚಿಸಬೇಕು. ಗೋವಂಶ ಮಾರಾಟ ಮಾಡುವುದು ಅಪರಾಧವಾಗಿದ್ದು ಅದಕ್ಕೆ 5 ವರ್ಷದ ವರೆಗೆ ಶಿಕ್ಷೆ ಇರುವ ಬಗ್ಗೆ ರೈತರಿಗೆ /ಹೈನುಗಾರರಿಗೆ ಜಾಗೃತಿ ಮೂಡಿಸಬೇಕು ಎಂದು ಮನವಿಯಲ್ಲಿ ಎಚ್ಚರಿಸಿದೆ.
ಗೋಹತ್ಯೆಗೆ 7 ವರ್ಷದ ವರೆಗೆ ಶಿಕ್ಷೆ ಹಾಗೂ ರೂಪಾಯಿ 5 ಲಕ್ಷದ ವರೆಗೆ ದಂಡ ಇರುವ ಬಗ್ಗೆಯೂ ಹಾಗೂ "ವಧೆ / ಬಲಿ ಕೊಟ್ಟ ಜಾಗವನ್ನ ಮುಟ್ಟುಗೋಲು ಹಾಕಲಾಗುತ್ತದೆ" ಎಂಬ ಬಗ್ಗೆಯೂ ಜಾಗೃತಿ ಮೂಡಿಸಬೇಕು. ಬೀಟ್ ಪೋಲೀಸರ ಮೂಲಕ ಅಕ್ರಮ ಕಸಾಯಿಖಾನೆ ಗುರುತಿಸಿ ಅದನ್ನು ಬಂದ್ ಮಾಡಿಸಬೇಕು. ಮನೆಯ ಮುಂದೆ ಕಟ್ಟಿರುವ ಗೋವುಗಳ ಬಗ್ಗೆ ಮಾಲೀಕರ ಪ್ರಮಾಣ ಪತ್ರವನ್ನ ಪಡೆದು ಪರಿಸೀಲಿಸುವಂತೆ ಒತ್ತಾಯಿಸಿದೆ.
ಮನವಿ ನೀಡುವ ವೇಳೆ ಸಂಘಟನೆಯ ಜಿಲಗಲಾಧ್ಯಕ್ಷ ವಾಸುದೇವ್, ಸಾಮರಸ್ಯ ಪ್ರಮುಖ್ ರಮೇಶ್ ಬಾಬು ಜಾಧವ್, ರಾಜೇಶ್ ಗೌಡ ಕಾರ್ಯದರ್ಶಿ ಆನಂದ್ ರಾವ್ ಜಾಧವ್, ಜಿಲ್ಲಾ ಸಂಚಾಲಕ ಸುರೇಶ್, ಜಿತೇಂದರ್ ಎಂ ಎಸ್, ವಿನೋದ್ ಕುಮಾರ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.
VHP Bajrang Dal demands strict legal action