SUDDILIVE || SHIVAMOGGA
ಕಮಲ ಹಾಸನ್ ನನ್ನ ಬಂಧಿಸುವಂತೆ ಕರವೇ ಒತ್ತಾಯ-Karave demands actor Kamal Hassan to be arrested
ಮೊಂಡಾಟ ಮೆರೆದ ಕಮಲ್ ಹಾಸನನ್ನು ಬಂಧಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರೀಣ್ ಶೆಟ್ಟಿ ಬಣ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿ ಎಸ್ ಪಿ ಮಿಥುನ್ ಕುಮಾರ್ ಜಿ ಕೆ ಅವರಿಗೆ ಮನವಿ ಸಲ್ಲಿಸಿತು.
ಥಗ್ ಲೈಫ್ ಚಲನಚಿತ್ರದವ ಧ್ವನಿ ಸುರಳಿ ಬಿಡುಗಡೆ ಸಂದರ್ಭದಲ್ಲಿ ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿದ್ದು ಎಂದು ವಿವಾದ ಸೃಷ್ಟಿಸಿದ ನಟ ಕಮಲ ಹಾಸನ್ ನಿನ್ನೆ ಕರ್ನಾಟಕ ಹೈಕೋರ್ಟ್ ಸಹ ಕ್ಷಮೆ ಕೇಳುವಂತೆ ಸೂಚಿಸಿದರೂ ಸಹ ನಟ ಕ್ಷಮೆ ಕೇಳದೆ ಉದ್ಧಟತನ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ರಕ್ಷಣ ವೇದಿಕೆ ಪ್ರತಿಭಟಿಸಿ ಮನವಿ ಸಲ್ಲಿಸಿದೆ.
ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕೋಟ್ಯಾನ್ ನ್ಯಾಯಾಲಯ ಕ್ಷಮೆ ಕೇಳುವಂತೆ ಹೇಳಿದರೂ ಮೊಂಡಾಟ ಮೆರೆದಿದ್ದಾರೆ. ಈ ಕೂಡಲೇ ಕ್ಷಮೆ ಕೇಳಬೇಕು. ಜೊತೆಗೆ ಬಂಧಿಸಬೇಕು. ಬೇರೆಯಾವ ಭಾಷೆಯ ವಿರುದ್ಧ ಮಾತನಾಡಬಾರದು. ನಟ ಬಯಸಿದರೆ ಅವರಿಗೆ ಕನ್ನಡದ ಇತಿಹಾಸದ ಬಗ್ಗೆ ಪಾಠ ಮಾಡಲು ಸಿದ್ದ ಎಂದರು.
ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಗೌರವಾಧ್ಯಕ್ಷ ನಿಂಬೆ ಹಣ್ಣು ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗನಾಥ್ ಎನ್, ಡಿ.ಲಿಂಗರಾಜ್ ಹರೀಶ್, ಮಂಜುಳ ಎಂ, ಶಂಕರ್ ಮೊದಲಾದವರು ಉಪಸ್ಥಿತರಿದ್ದರು.
Karave demands actor Kamal Hassan to be arrested