SUDDILIVE || SHIVAMOGGA
6 ತಿಂಗಳ ವರೆಗೆ ಶಾಸಕರ ಅಮಾನತ್ತೇ ಅಸಂವಿಧಾನಿಕ-ಆರ್ ಕೆ ಸಿದ್ರಾಮಣ್ಣ-Suspension of MLAs for 6 months is unconstitutional - RK Siddaramaiah
ಮಾರ್ಚ್ 29ಕ್ಕೆ 18 ಜನ ಶಾಸಕರನ್ನು ಅಮಾನತು ಪಡಿಸಿ ಆದೇಶಿಸಿರುವ ಸಭಾಧ್ಯಕ್ಷರ ತೀರ್ಮಾನವೇ ಅಸಂವಿಧಾನಿಕವಾಗಿದೆ. ಇದು ಮುಗಿದ ಅಧ್ಯಾಯವಾಗಿದ್ದರೂ ಕಾಂಗ್ರೆಸ್ ನವರ ಆಕ್ಷೇಣೆ ಆಧಾರ ರಹಿತ ಎಂದು ಮಾಜಿ ಎಂಎಲ್ ಸಿ ಆರ್ ಕೆ ಸಿದ್ದರಾಮಣ್ಣ ಆಗ್ರಹಿಸಿದರು.
18 ಜನರ ಅಮಾನತು ಮಾ. 20 ರಂದು ನಡೆದಿತ್ತು. ಮೇ 25 ಕ್ಕೆ ಅಮಾನತು ವಾಪಸ್ ಪಡೆಯಲಾಗಿದೆ. ಎರಡು ತಿಂಗಳು ನಾಲ್ಕು ದಿನದ ವರೆಗೆ ಅಮಾನತು ಪಡಿಸಿರುವ ಸದನದ ಸಭಾಧ್ಯಕ್ಷರ ತೀರ್ಪೇ ಅಸಂವಿಧಾನಕವಾಗಿತ್ತು. ಕಾಂಗ್ರೆಸ್ ನವರು ಸಭಾಧ್ಯಕ್ಷರು ಶಾಸಕರ ಅಮಾನತು ಪಡೆಸಿರುವುದನ್ನ ಅಸಂವಿಧಾನ ಎಂದು ಪ್ರಸ್ತಾಪಿಸಿದ್ದಾರೆ. ಈ ಕುರಿತು ರಾಜ್ಯಪಾಲ ಮತ್ತು ಸಭಾಪತಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ ಎಂದು ಅವರು ಆಕ್ಷೇಪಿಸಿದ್ದಾರೆ.
ಸೆಕ್ಷನ್ 348ರ ಪ್ರಕಾರ ಸಭಾಧ್ಯಕ್ಷರು ಶಾಸಕರ ಅಮಾನತ್ತಿನಲ್ಲಿಡುವ ಅಧಿಕಾರ ನೀಡಿದೆ. ಸಭಾಧ್ಯಕ್ಷರು ಮಾ.21 ರಿಂದ 6 ತಿಂಗಳ ವರೆಗೆ ಅಮಾನತ್ತು ಪಡಿಸಿ ಸಭಾಧ್ಯಕ್ಷರು ಆದೇಶಿಸಿದ್ದಾರೆ. ಇದು ಸಭಾಧ್ಯಕ್ಷರ ತೀರ್ಪು ಅಷ್ಟೆ. ನಡವಳಿಕೆಯ ಪುಸ್ತಕದಲ್ಲಿ ಸೆಕ್ಷೆನ್ 348 ರ ಪ್ರಕಾರ ಸಭಾಧ್ಯಕ್ಷರಿಗೆ 6 ತಿಂಗಳ ವರೆಗೆ ಶಾಸಕರನ್ನ ಅಮಾನತು ಪಡಿಸುವ ಅಧಿಕಾರವಿದೆಯೇ ಎಂದು ಪ್ರಶ್ನಿಸಿದರು.
ಆದರೆ ಸಭಾಧ್ಯಕ್ಷರಿಗೆ ಎಲ್ಲಿಯ ವರೆಗೆ ಅಧಿಕಾರವಿದೆ ಎಂಬುದು ನಡಾವಳಿ ಪುಸ್ತಕ ಪ್ರಸ್ತಾಪಿಸಿದೆ. ಮುಂದಿನ ಸದನ ನಡೆಯುವರೆಗೆ ಮಾತ್ರ ಸಭಾಧ್ಯಕ್ಷರಿಗೆ ಅಮಾನತ್ತಿನಲ್ಲಿಡಲು ಅಧಿಕಾರವಿದೆ. ಹಾಗಾಗಿ ಮಾರ್ಚ್ ನಲ್ಲಿ ಅಮಾನತ್ತು ಮಾಡಿದ ಆದೇಶವೇ ಅಸಂವಿಧಾನಕವಾಗಿದೆ. ನಿರ್ಣಯ ಅಧ್ಯಕ್ಷರಾಗಿರುವುದರಿಂದ ಯಾವಾಗ ಬೇಕಾದರೂ ಪುನರ್ ಪರಿಶೀಲಿಸಬಹುದು ಎಂದರು. ಮುಂದಿನ ದಿನಗಳಲ್ಲಿ ಅಚಾತುರ್ಯ ಸಭಾಧ್ಯಕ್ಷರು ನಡೆಸಬಾರದು ಎಂದರು.
ಆದರೆ, ಕೆಪಿಸಿಸಿ ವಕ್ತಾರರು ಸಭಾಧ್ಯಕ್ಷರು ಸದನದಲ್ಲಿ ಅಮಾನತು ವಾಪಾಸ್ ಪಡೆಯದೆ ಹೊರಗಡೆ ಅಮಾನತು ವಾಪಾಸ್ ಪಡೆದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದು, ಈ ಪ್ರಶ್ನೆಯನ್ನ ಮಾಧ್ಯಮದವರು ಕೇಳಿದಾಗ ಉತ್ತರಿಸಿದ ಸಿದ್ದರಾಮಣ್ಣ, ಅನಾನತು ಪಡಿಸಿರುವುದು ಸಭಾಧ್ಯಕ್ಷರ ತೀರ್ಪು ಅಲ್ಲ. ನಿರ್ಣಯ ಅಷ್ಟೆ, ಸದನದ ಒಳಗೆ ತೀರ್ಮಾನ ಆಗಬೇಕು ಅಂತ ಎಲ್ಲೂ ನಿಯಮವಿಲ್ಲ. ಅದು ಅವರ ವಿವೇಚನವಾಗಿದೆ. ಶಾಸಕರನ್ನ 6 ತಿಂಗಳ ವರೆಗೆ ಅಮಾನತು ಪಡಿಸಿರುವುದು ಅಸಂವಿಧಾನಕ ಎಂದರು.
Suspension of MLAs for 6 months is unconstitutional