SUDDILIVE || SHIVAMOGGA
ನಾಳೆ ಹಿಂದೂ ಸಂಘಟನೆಯಿಂದ ಭರ್ಜರಿ ಪ್ರತಿಭಟನೆ-Massive protest by Hindu organization tomorrow
ವಿಶ್ವ ಹಿಂದೂ ಪರಿಷತ್ ಬಜರಂಗದಳ ದ ವತಿಯಿಂದ ನಾಳೆ 11:00ಗೆ ಜಯನಗರ ಪೊಲೀಸ್ ಠಾಣೆ ಎಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ
ಕರ್ನಾಟಕ ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರಿಗೆ ಕಿರುಕುಳವನ್ನು ಸುಮಗದಲ್ಲಿ ಸಹ ಮುಂದುವರಿಸಿದ್ದು ಸುಳ್ಳು ಪ್ರಕರಣ ದಾಖಲಿಸಿ, ಗೋ ರಕ್ಷಕರನ್ನು ಹತ್ತಿಕ್ಕುತ್ತಿದೆ ಎಂದು ಸಂಘಟನೆ ಆರೋಪಿಸಿದೆ
ಜಯನಗರ, ಕುಂಸಿ, ರಿಪ್ಪನ್ ಪೇಟೆ ಪೊಲೀಸ್ ಠಾಣೆಗಳಲ್ಲಿ ಗೋವುಗಳನ್ನು ರಕ್ಷಿಸಲು ಹೋದವರ ಮೇಲೆ ಎಫ್ ಐ ಆರ್ ಆಗಿದೆ. ಸಾಗರದಲ್ಲಿ ಇಂದು ಸಂಘಟಕರ ಮೇಲೆ ಪೊಲೀಸರು ಬೆದರಿಸಿರುವುದಾಗಿ ಸಂಘಟನೆ ಆರೋಪಿಸಿದೆ ಇಲ್ಲಿ ಗೋ ಗೋ ರಕ್ಷಕರ ರಕ್ಷಣೆ ಯಾಗದೆ ಗೋ ಹಂತಕರ ರಕ್ಷಣೆಯಾಗಿದೆ ಈ ಹಿನ್ನೆಲೆಯಲ್ಲಿ ನಾಳೆ ಪ್ರತಿಭಟಿಸುತ್ತಿರುವುದಾಗಿ ವಿಶ್ವಹಿಂದು ಪರಿಷತ್ ಬಜರಂಗಳ ದ ಮುಖ್ಯಸ್ಥರು ದೂರಿದ್ದಾರೆ.
ಗೋ ಹತ್ಯೆ ಕಾನೂನಿನಲ್ಲಿ ಯಾವುದೇ ಸಾರ್ವಜನಿಕರು ಗೋವುಗಳನ್ನು ಸಾಗಾಣಿಕೆ ಮಾಡುವಾಗ ಪ್ರಶ್ನಿಸುವ ಹಕ್ಕನ್ನು ನೀಡಿದೆ ಅಲ್ಲದೆ ಇವೆಲ್ಲದಕ್ಕಿಂತ ಮುಖ್ಯವಾಗಿ ಗೋವುಗಳನ್ನು ಯಾವುದೇ ವಾಹನಗಳಲ್ಲಿ ಸಾಗಿಸುವುದು ನಿಶಿದ್ಧ ವಾಗಿದೆ. ಆದರೂ ಗೋರಕ್ಷಕರ ಮೇಲೆ ಠಾಣೆಗಳಲ್ಲಿ ದೂರು ದಾಖಲಾಗಿದೆ ಎಂದು ಸಂಘಟನೆ ಆಗ್ರಹಿಸಿದೆ.
Massive protest by Hindu organization tomorrow