SUDDILIVE || SHIVAMOGGA
VISL ಕಾರ್ಖಾನೆ ಕುರಿತು ಪೆಜಾವರ ಶ್ರೀಗಳು ಹೇಳಿದ್ದೇನು?What did the Pejawar sri say about the VISL factory?
ನಿನ್ನೆ ಶಿವಮೊಗ್ಗದಲ್ಲಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವ ತೀರ್ಥ ಪ್ರಸನ್ನ ಶ್ರೀಗಳನ್ನು ವಿಐಎಸ್ ಎಲ್ ಗುತ್ತಿಗೆ ನೌಕರರ ಸಂಘದ ವತಿಯಿಂದ ಭೇಟಿ ಮಾಡಲಾಯಿತು.
ಅವರಿಗೆ ಕಾರ್ಖಾನೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನ ಮತ್ತು ಮುಂದೆ ಆಗಬೇಕಾದ ಕೆಲಸಗಳನ್ನು ಸ್ವಾಮೀಜಿಯವರಿಗೆ ತಿಳಿಸಲಾಯಿತು. ಸ್ವಾಮೀಜಿಯವರು ಸಂಘದ ಮಾತುಗಳನ್ನು ಆಲಿಸಿದರು.
ನಾನು ಸುಮಾರು 2 ವರ್ಷಗಳ ಹಿಂದೆಯೇ ಕಾರ್ಖಾನೆಗೆ ಒಳ್ಳೆಯದಾಗುತ್ತೆ ಕಾರ್ಖಾನೆ ಮುಚ್ಚುವುದಿಲ್ಲ ಎಂದು ತಿಳಿಸಿದ್ದೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯೂ ಉಳಿಯುವುದು ಮತ್ತು ಗುತ್ತಿಗೆ ಕಾರ್ಮಿಕರ ಸಮಸ್ಯೆಯನ್ನೂ ಸಂಬಂಧ ಪಟ್ಟ ಸಂಸದರು ಮತ್ತು ಸಚಿವರು ಬಳಿ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಆಶೀರ್ವಚನ ನೀಡಿರುತ್ತಾರೆ
ಈ ಬೇಟಿಯಲ್ಲಿ ಗುತ್ತಿಗೆ ಕಾರ್ಮಿಕ ಸಂಘದ ವತಿಯಿಂದ ಅವರಿಗೆ ಗೌರವ ಸೂಚಿಸಲಾಯಿತು. ಸಂಘದ ಅಧ್ಯಕ್ಷರಾದ ಸುರೇಶ್ ಉಪಾಧ್ಯಕ್ಷರಾದ ಮಂಜುನಾಥ ಪ್ರಧಾನ ಕಾರ್ಯದರ್ಶಿಯಾದ ರಾಕೇಶ್ ಸಹಕಾರ್ಯದರ್ಶಿ ಮಂಜುನಾಥ್ ಖಜಾಂಚಿಯವರಾದ ಆನಂದ್ ಹಾಗೂ ನಿವೃತ್ತ ಕಾರ್ಮಿಕರಾದ ಎಸ್ ನರಸಿಂಹಾಚಾರ್ ಉಪಸ್ಥಿತರಿದ್ದರು ಎಂದು ತಿಳಿಯಬಯಸುತ್ತೇವೆ.
Pejawar sri say about the VISL