SUDDILIVE || SHIVAMOGGA
ಶಿವಮೊಗ್ಗ ಮರ ಹನನ: ಕ್ರಮಕ್ಕೆ ಖಂಡ್ರೆ ಸೂಚನೆ, ಪೈ ಇಂಟರ್ ನ್ಯಾಷನಲ್ ಮಾಲ್ ಮ್ಯಾನೇಜರ್ ಅರೆಸ್ಟ್-Shivamogga tree felling: FIR registered
ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯಲ್ಲಿ ಹೊಟೆಲ್ ಒಂದರ ಎದುರು ರಸ್ತೆ ಬದಿಯಲ್ಲಿ ಬೆಳೆದ ಬೃಹತ್ ಮರಗಳನ್ನು ರಾತ್ರೋ ರಾತ್ರಿ ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವರ ಸೂಚನೆಯ ಮೇರೆಗೆ ಎಫ್.ಐ.ಆರ್. ದಾಖಲಾಗಿದೆ. ಆರೋಪಿ ಶಿವಮೊಗ್ಗದ ಪೈ ಇಂಟರ್ ನ್ಯಾನಲ್ ಮಾಲ್ ನ ವ್ಯವಸ್ಥಾಪಕನನ್ನ ಅರಣ್ಯ ಇಲಾಖೆ ಬಂಧಿಸಿದೆ.
ಮರ ಕಡಿಯಲು ಇಲಾಖೆಯ ಪೂರ್ವಾನುಮತಿ ಇಲ್ಲದೆ, ಅನಗತ್ಯವಾಗಿ ಮರ ಕಡಿಯಲಾಗಿದೆ ಎಂದು ಪರಿಸರ ಪ್ರೇಮಿಗಳು ಧರಣಿ ನಡೆಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಸರ್ಕಾರಿ ಜಾಗದಲ್ಲಿ ಮತ್ತು ರಸ್ತೆ ಬದಿಯಲ್ಲಿ ಬೆಳೆದ ಹಲವು ಮರಗಳನ್ನು ಅನುಮತಿ ಇಲ್ಲದೆ ಕಡಿದವರ ವಿರುದ್ಧ ನಿಯಮಾನುಸಾರ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಶಿವಮೊಗ್ಗ ಶಂಕರವಲಯ ಅರಣ್ಯಾಧಿಕಾರಿಗಳು, ಬೆಂಗಳೂರು ನಾಗರಬಾವಿ, ಮಲ್ಲತ್ತಹಳ್ಳಿಯ ಶ್ರೀಧರ್ ಬಿ.ಪಿ., ಶಿವಮೊಗ್ಗ ಪೈ ಇಂಟರ್ ನ್ಯಾಷನಲ್ ಮಾಲ್ ನ ಮ್ಯಾನೇಜರ್ ದೀಪಕ್ ಕುಮಾರ್ ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 33, 62 ಮತ್ತು 80ರಡಿ ಎಫ್.ಐ.ಆರ್. ದಾಖಲಿಸಿದ್ದು, ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ.
Shivamogga tree felling: FIR registered