SUDDILIVE || SHIVAMOGGA
ಖ್ಯಾತ ಶಾಸನತಜ್ಞ ಹೃದಯಾಘಾತದಿಂದ ನಿಧನ-Renowned jurist dies of heart attack
ಖ್ಯಾತ ಶಾಸನತಜ್ಞ ಡಾ.ಜಗದೀಶ ಅಬಸಿಬಾಗಿಲವರ್ (65) ಅವರು ಇಂದು ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರು ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರು ವೃತ್ತಿಯಿಂದ ಸಿವಿಲ್ ಇಂಜಿನೀಯರ್ ಅಗಿದ್ದು, ಪ್ರವೃತ್ತಿಯಿಂದ ಖ್ಯಾತ ಇತಿಹಾಸಕಾರರು, ಶಾಸನತಜ್ಞರಾಗಿ ಹೆಸರು ಮಾಡಿದ್ದರು.ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಲ್ಲಿ (ಕೆಎಸ್ ಎಸ್ ಐಡಿಸಿ) ಮುಖ್ಯ ಇಂಜಿನೀಯರ್ ಆಗಿ ಸೇವಾ ನಿವೃತ್ತಿ ಹೊಂದಿದ್ದರು.
ಸ್ವಭಾವತ: ಅತ್ಯಂತ ಸರಳ, ನಯ, ವಿನಯ, ಸ್ನೇಹ ಜೀವಿಯಾಗಿದ್ದರು.ಶ್ರೀಯುತರು ಇಂಜಿನಿಯರ್ ಆಗಿದ್ದರೂ ಇತಿಹಾಸದಲ್ಲಿನ ಆಸಕ್ತಿಯಿಂದಾಗಿ ಬಾಹ್ಯವಾಗಿಯೇ ಇತಿಹಾಸ ವಿಷಯದಲ್ಲಿ ಬಿ.ಎ., ಎಂ.ಎ. ಮುಗಿಸಿಬಳಿಕ ಮಧ್ಯ ಯುಗೀನ ಕರ್ನಾಟಕದಲ್ಲಿ ತೂಕ ಮತ್ತು ಅಳತೆ ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿದಗದರು. ಕರ್ನಾಟಕ ಇತಿಹಾಸ ಅಕಾಡೆಮಿಯು ಸಂಶೋಧನಾ ಕ್ಷೇತ್ರಕ್ಕೆ ಕೊಡ ಮಾಡುವ ಪ್ರತಿಷ್ಠಿತ ಸೂರ್ಯಕೀರ್ತಿ ಪ್ರಶಸ್ತಿಗೂ ಭಾಜನರಾಗಿದ್ದರು. ನೂರಾರು ವಿಚಾರಸಂಕಿರಣಗಳಲ್ಲಿ ವಿದ್ವತ್ಪೂರ್ಣ ಪ್ರಭಂದವನ್ನು ಮಂಡಿಸಿ ಹೊಸ ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದರು. ಅನೇಕ ಯುವ ಸಂಶೋಧಕರಿಗೆ ಶಾಸನಶಾಸ್ತ್ರದ ಮಾರ್ಗದರ್ಶಕರಾಗಿದ್ದರು.
ಭಾರತೀಯ ಇತಿಹಾಸ ಸಂಕಲನ ಸಮಿತಿಯ ಸದಿವಮೊಗ್ಗ ಜಿಲ್ಲಾ ಘಟಕದ ನಿರ್ದೇಶಕರಲ್ಲೊಬ್ಬರಾಗಿದ್ದರು.ಡಾ.ಜಗದೀಶ್ ಅಗಸಿಬಾಗಿಲ ಅವರ ಅಗಲುವಿಕೆ ಇತಿಹಾಸ ಸಂಶೋಧನಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಅವರ ನಿಕಟವರ್ತಿಗಳಾದ ಭಾ.ಇ.ಸಂ.ಸಮಿತಿಯ ಪದಾಧಿಕಾರಿಗಳಾದ ಡಾ.ಬಾಲಕೃಷ್ಣ ಹೆಗಡೆ, ನಿಧಿನ್ ಓಲಿಕಾರ್ ಮತ್ತು ಅಜಯಕುಮಾರ್ ಶರ್ಮಾ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದವರಿಗೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಸಿದ್ದಾರೆ.ಮತರ ಅಂತ್ಯಕ್ರಿಯೆ ನಾಳೆ ದಿ.15-6-2025 ರಂದು ಬೆಳಿಗ್ಗೆ ಅವರ ಹುಟ್ಟೂರಾದ ರಟ್ಟಿಹಳ್ಳಿ ಸಮೀಪದ ಕೂಲಿಯಲ್ಲಿ ನಡೆಯಲಿದೆ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.
Renowned jurist dies of heart attack
ಸುದ್ದಿ ಲೈವ್ ಚೆನ್ನಾಗಿ ಮೂಡಿ ಬರುತ್ತಿದೆ
ಪ್ರತ್ಯುತ್ತರಅಳಿಸಿಕನ್ನಡ ಕಾಗುಣಿತದ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗಿದೆ
ಇನ್ನು ಹೆಚ್ಚಿನ ಯಶಸ್ಸು ಕಾಣಲೆಂದು ಹಾರೈಸುತ್ತೇನೆ