SUDDILIVE || SHIVAMOGGA
ಆತಂಕ ಸೃಷ್ಟಿಸಿದ ರಾಜ್ಯ ಹೆದ್ದಾರಿಯ ದರೋಡೆ-Robbery on state highway creates panic
ಶಿವಮೊಗ್ಗ ತಾಲೂಕಿನ ಕಲ್ಲಾಪುರ ಗ್ರಾಮ ಬಳಿ ರಾಜ್ಯ ಹೆದ್ದಾರಿ ಟೋಲ್ ಗೇಟ್ ಬಳಿ ರಾಬರಿ ನಡೆದಿದೆ. ಶಿಕಾರಿಪುರದ ಜನ ಈ ದರೊಡೆಯಿಂದ ಬಿಚ್ಚಿ ಬಿದ್ದಿದ್ದಾರೆ.
ಜೂನ್ 12 ರ ರಾತ್ರಿ 8 ಜನರ ತಂಡ ಶಿಕಾರಿಪುರ ತಾಲೂಕಿನ ಗಾಮಾ ಗ್ರಾಮಕ್ಕೆ ಕಾರ್ ನಲ್ಲಿ ತೆರಳುತ್ತಿದ್ದ ಶಿವಯೋಗಿಯ ಕಾರ್ ನ್ನ ಅಡ್ಡ ಹಾಕಿ ದರೋಡೆ ನಡೆಸಿದ್ದಾರೆ. ದರೋಡೆ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾ ದಲ್ಲಿ ಸೆರೆ ಸರಿಯಾಗಿದೆ.
ಟೋಲ್ ಗೇಟ್ ಬಳಿ ತೆರಳುತ್ತಿದ್ದ ಸಮಯದಲ್ಲಿ ಕಾರ್ ಗೆ ಅಡ್ಡಗಟ್ಟಿ ದರೋಡೆ ನಡೆದಿದೆ. ಕಾರ್ ಚಲಿಸುತ್ತಿದ್ದ ಶಿವಯೋಗಿ ಬಳಿ ಇದ್ದ 10 ಸಾವಿರ ಹಣವನ್ನು ದರೋಡೆ ಗ್ಯಾಂಗ್ ಇಟ್ಟುಕೊಂಡು ಹೋಗಿದೆ
8 ರಿಂದ 10 ಜನರ ತಂಡದಿಂದ ದರೋಡೆ ಆತಂಕ ಸೃಷ್ಟಿಸಿದೆ. ಹಲ್ಲೆಗೊಳಗಾದ ಕಾರು ಮಾಲೀಕ ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶಿವಯೋಗಿ ಓಂ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥನಾಗಿದ್ದನು.
Robbery on state highway creates panic