SUDDILIVE ||SHIKARIPURA
ಆರೋಪಿ ಚಾಲಕ ಬಸವರಾಜ್ ನನ್ನು ಗಲ್ಲಿಗೇರಿಸಿ ಇಲ್ಲ ನಮಗೆ ಒಪ್ಪಿಸಿ ಸೊಸೈಟಿ ಕೇರಿಯ ನಿವಾಸಿಗಳ ಆಗ್ರಹ-Society Keri residents demand that accused driver Basavaraj be hanged or handed over to us
ನಿನ್ನೆ ಶಿಕಾರಿಪುರದ ಸೊಸೈಟಿ ಕೇರಿಯಲ್ಲಿ ಮಹಿಳೆಯನ್ನು ಚಿಮುಟದಿಂದ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕಾರಿಪುರ ಟೌನ್ ಪೊಲೀಸ್ ಸ್ಟೇಷನ್ ನಲ್ಲಿ ಎಫ್ ಐ ಆರ್ ದಾಖಲಾಗಿದ್ದು ಆರೋಪಿ ಪತ್ತೆಯಾಗಬೇಕಿದೆ
ಪತ್ನಿ ಮಂಜುಳರನ್ನು ಕೊಲೆ ಮಾಡಿರುವ ಚಾಲಕ ಬಸವರಾಜ್ ಪತ್ನಿಯ ಶೀಲವನ್ನು ಅನುಮಾನಿಸಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಸುಮಾರು 18 ವರ್ಷಗಳ ಹಿಂದೆ ಹೊಳಲ್ಕೆರೆ ತಾಲ್ಲೂಕು ಮುತ್ತುಗದೂರು ಗ್ರಾಮದ ನಿವಾಸಿ ಬಸವರಾಜ್ ಎಂಬವನಿಗೆ ಸೊಸೈಟಿಕೇರಿಯ ಮಂಜುಳಾ ಎಂಬುವರು ಮದುವೆಯಾಗಿದ್ದರು. ಒಂದು ಗಂಡು ಎರಡು ಜನ ಹೆಣ್ಣು ಮಕ್ಕಳು ಇದ್ದರು. 15 ವರ್ಷ ಗಂಡನ ಗ್ರಾಮದಲ್ಲಿಯೇ ವಾಸವಾಗಿದ್ದ ಮಂಜುಳಾರವರು ಗಂಡನ ಅತಿರೇಕವಾದ ಸಾಲದಿಂದಾಗಿ ವಾಪಸ್ ಶಿಕಾರಿಪುರಕ್ಕೆ ಬಂದು ತಾಯಿ ಮನೆಯ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳನ್ನು ಸಾಕಿಕೊಂಡಿದ್ದರು
ಮೂರು ವರ್ಷದಿಂದ ತಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಗಂಡನ ಬಹುತೇಕ ಸಾಲವನ್ನು ಸಹ ಇವರು ತೀರಿಸಿದ್ದರು ಎಂದು ಕುಟುಂಬ ತಿಳಿಸಿದೆ. ಗಂಡ ಬಸವರಾಜ್ ಅತಿಯಾಗಿ ಪತ್ನಿಯನ್ನು ಸಂಶಿಸುತ್ತಿದ್ದು ಆಕೆಯ ಬಟ್ಟೆಯನ್ನು ಹಂಡೆ ಉರಿಗೆ ಬಳಸಿಕೊಂಡು ಸ್ನಾನ ಮಾಡಿದ್ದ ಘಟನೆಯೂ ಸಹ ನಡೆದಿತ್ತು.
ಅತಿಯಾದ ಕುಡಿತ ಅನುಮಾನಗಳಿಂದ ಬಸವರಾಜ್ ಪತ್ನಿಯೊಂದಿಗೆ ಸದಾ ಜಗಳವಾಡುತ್ತಿದ್ದನು ಎನ್ನಲಾಗಿದೆ. ಮೈನ್ಸ್ ಲಾರಿಗೆ ಚಾಲಕನಾಗಿ ಆಗಾಗ ಕೆಲಸಕ್ಕೆ ಹೋಗಿ ಬರುತ್ತಿದ್ದು ಬಿಟ್ಟರೆ ಬಸವರಾಜ್ ದುಡಿಮೆ ಏನೂ ಇಲ್ಲವೆಂದು ಮೃತಳ ಕುಟುಂಬ ಆರೋಪಿಸಿದೆ. ಕೊಲೆ ಆರೋಪಿಯ ಪತ್ತೆಯನ್ನು ಪೊಲೀಸರು ಮಾಡಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ ಆತನನ್ನು ಗಲ್ಲಿಗೇರಿಸಬೇಕು ಇಲ್ಲವಾದಲ್ಲಿ ನಮಗೆ ಒಪ್ಪಿಸಿ ಎಂದು ಸೊಸೈಟಿ ಕೇರಿಯ ನೆರೆಹೊರೆಯರು ಆಗ್ರಹಿಸಿದ್ದಾರೆ.
Society Keri residents demand