ಕತ್ತು ಸೀಳಿಕೊಂಡು ಆತ್ಮಹತ್ಯೆ-Suicide by slitting throat

SUDDILIVE || SHIVAMOGGA

ಕತ್ತು ಸೀಳಿಕೊಂಡು ಆತ್ಮಹತ್ಯೆ-Suicide by slitting throat

Suicide, throat


ಕುಡಿತದ ಮತ್ತಿನಲ್ಲಿ ಕತ್ತುಕೊಯ್ದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ರಾತ್ರಿ ನಡೆದಿದೆ. 

ಮಾರಶೆಟ್ಟಿಹಳ್ಳಿ ಗ್ರಾಮದ ರಮೇಶ್  (40)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ಮಿಲಿಟರಿ ಹೋಟೆಲ್ ನಡೆಸುತ್ತಿದ್ದ ರಮೇಶ್ ಗೆ ಕುಡಿತದ ಚಟವಿತ್ತು. ಹೋಟೆಲ್ ನ ಪಕ್ಕದಲ್ಲೇ ಇದ್ದ ಶೌಚಾಲಯದಲ್ಲಿ ಕತ್ತುಕೋಯ್ದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಕುಡಿತದ ಚಟ ಬಿಡಿಸಲು ರಮೇಶ್ ಕುಟುಂಬ ಹರಸಾಹಸ ಪಡುತ್ತಿತ್ತು. ಕುಡಿತದ ಚಟ ಬಿಡಿಸಲು ಹಲವಾರು  ಬಾರಿ ಪ್ರಯತ್ನ ಪಡಲಾಗಿದ್ದರೂ ಸಹ ಯಾವ ಪ್ರಯತ್ನವೂ ಫಲಕೊಟ್ಟಿರಲಿಲ್ಲ. ಈ ಹಿಂದೆ ಕೂಡ ಎರಡು ಬಾರಿ ಆತ್ಮಹತ್ಯೆಗೆ ಯತ್ನಪಟ್ಟಿದ್ದನು ಎನ್ನಲಾಗಿದೆ. ಇಂದು ರಾತ್ರಿ 8:2೦ಕ್ಕೆ ಹೋಟೆಲ್ ನಲ್ಲಿ ಇದ್ದ ಚಾಕುತೆಗೆದು ಕೊಂಡು ಶೌಚಾಲಯಕ್ಕೆ ಹೋದ ರಮೇಶ್ ನಂತರ ಚಾಕುವಿನಿಂದ ಕತ್ತು ಸೀಳಿಕೊಂಡಿದ್ದಾನೆ. 


ರಮೇಶ್ ಬಾರದಿರುವುದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಲು ಯತ್ನಿಸಿದಾಗ ಶೌಚಾಲಯದಲ್ಲಿ ರಕ್ತದ ಮಡಿಲಿನಲ್ಲಿ  ರಮೇಶ್ ಮಲಗಿದ್ದ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದ ಘಟನೆ ನಡೆದಿದೆ. 

Suicide by slitting throat

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close