SUDDILIVE || SHIVAMOGGA
ಚಿತ್ರದ ಶೂಟಿಂಗ್ ಗೆ ಪಡೆದ ಅನುಮತಿಯನ್ನ ಹಾಜರು ಪಡಿಸಲು ಮೂರು ದಿನಗಳ ಗಡುವು-Three-day deadline for kanthara team
ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡದೆ ಹೊಂಬಾಳೆ ಫಿಲಂ ಕಾಂತಾರ ಚಾಪ್ಟರ್-೧ ಸಿನಿಮಾದ ಶೂಟಿಂಗ್ ನ್ನು ಮಾಡುತ್ತಿರುವುದು ಸ್ಪಷ್ಟವಾಗಿದೆ. ಮೊನ್ನೆ ರಾತ್ರಿ ನಡೆದ ದೋಣಿ ಮಗುಚಿದ ಘಟನೆಗೆ ಸಂಬಂಧಿಸಿದಂತೆ ಚಿತ್ರ ತಂಡಕ್ಕೆ ತಹಶೀಲ್ದಾರ್ ಮೂರು ದಿನಗಳವರೆಗೆ ಗಡುವು ನೀಡಿದ್ದಾರೆ.
ಶನಿವಾರ ಸಂಜೆ ಶೂಟಿಂಗ್ ವೇಳೆ ಮಾಣಿ ಜಲಾಶಯದಲ್ಲಿ ದೋಣಿಯೊಂದು ಮಗಚಿಕೊಂಡಿರುವ ಘಟನೆ ನಡೆದಿದೆ. ಭಾನುವಾರ ಮಾಧ್ಯಮಗಳು ಸುದ್ದಿ ಮಾಡುವ ವರೆಗೆ ಜಿಲ್ಲಾಡಳಿತಕ್ಕಾಗಲಿ, ತಾಲೂಕು ಆಡಳಿತಕ್ಕಾಗಲಿ, ಸ್ಥಳೀಯ ಗ್ರಾಮಪಂಚಾಯಿತಿಗಾಗಲಿ, ಕೊನೆಯ ಪಕ್ಷ ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿಯಿಲ್ಲದಿರುವುದು ಅಚ್ಚರಿ ಮೂಡಿಸಿದೆ.
ಅದು ಯಾವ ಅಧಿಕಾರಿಗಳು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡದೆ ಶೂಟಿಂಗ್ ಮಾಡಿ ಎಂದು ಹೇಳಿಕಳುಹಿಸಿದನೋ ಗೊತ್ತಿಲ್ಲ. ಒಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತಗಳು ಭಾರತದ ವಿಕೇಂದ್ರೀಕರಣದ ವ್ಯವಸ್ಥೆಯಲ್ಲಿ ಇದೆಯೋ ಅಥವಾ ಡಿಕ್ಟೇರ್ ಶಿಪ್ ನ ಅಡಿಯಲ್ಲಿದೆಯೋ ಎಂಬ ಅನುಮಾನಕ್ಕೆ ಚಲನಚಿತ್ರತಂಡ ವರ್ತಿಸುವಂತೆ ಕಾಣುತ್ತಿದೆ. ಓರ್ವ ತಹಶೀಲ್ದಾರ್ ಕರೆ ಮಾಡಿ ತಾವು ಶೂಟಿಂಗ್ ಗೆ ಪಡೆದ ಅನುಮತಿಯನ್ನ ತಾಲೂಕು ಆಡಳಿತಕ್ಕೆ ತೋರಿಸಿ ಎಂದರೂ ತಂದು ತೋರಿಸಿಲ್ಲ.
ಒಟ್ಟಿನಲ್ಲಿ ವ್ಯವಸ್ಥೆಗಳು ಹಾಳಾಗಿ ಹೋಗಿವೆ. ಅಲ್ಲದೆ ಮಳೆಗಾಲದಲ್ಲಿ ಮಳೆ ಹೆಚ್ಚು ಬೀಳುತ್ತಿದ್ದರೂ ಅದು ಯಾವ ಸೀಮೆಯ ಅಧಿಕಾರಿಗಳು ಶೂಟಿಂಗ್ ಗೆ ಅನುಮತಿ ನೀಡಿದ್ದಾರೋ ಭಗವಂತನೇ ಬಲ್ಲ. ಮಲೆನಾಡಿನಲ್ಲಿ ಮಳೆಯಾದರೆ ಮರಳು ಕ್ವಾರೆಗಳು ಬಂದ್ ಆಗ್ತಾವೆ. ಆದರೆ ಸಿನಿಮಾ ಶೂಟಿಂಗ್ ಗೆ ಈ ಭಾಗದಲ್ಲಿ ಅನುಮತಿ ನೀಡಲಾಗಿದೆ. ಅದರಲ್ಲೂ ಮಹಿಳಾ ತಹಶಸೀಲ್ದಾರ್ ಒಬ್ಬರು ಪ್ರತಿಷ್ಠಿತ ಸಿನಿಮಾ ತಂಡಕ್ಕೆ ಅನುಮತಿಯನ್ನ ಪಡೆದಿರುವುದನ್ನ ತಂದು ತೋರಿಸಲು ಮೂರು ದಿನ ಗಡವು ನೀಡಿದ್ದಾರೆ.
ಮೂರು ದಿನದಲ್ಲಿ ಚಿತ್ರ ತಂಡ ಏನು ಮಾಡಲಿದೆ ಕಾದು ನೋಡಬೇಕಿದೆ. ಆದರೆ ಮೇಡಂ ಅವರು ಅನುಮತಿ ಪೆದಿರುವ ಬಗ್ಗೆ ತಂದು ನೀಡದಿದ್ದರೆ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂಬ ಧೈರ್ಯ ತೋರಿದ್ದಾರೆ. ಆದರೆ ಚಿತ್ರ ತಂಡ ಈಗಾಗಲೇ ಸ್ಥಳೀಯ ಠಾಣೆಗೂ ಮಾಹಿತಿ ನೀಡದೆ ಶೂಟಿಂಗ್ ನ್ನ ನಡೆಸುತ್ತಿರುವುದು ಉದ್ಧಟತನವಲ್ಲವೇ? ಅವಘಡ ಸಂಭವಿಸಿದರೆ ಬೆಂಗಳೂರಿನಲ್ಲಿ ಕುಳಿತು ಅನುಮತಿ ನೀಡುವ ಅಧಿಕಾರಿಗಳಲು ಹೊಣೆಯಾಗುತ್ತಾರಾ ಎಂಬ ಪ್ರಶ್ನೆಗೂ ಉತ್ತರ ಸಿಗಬೇಕಿದೆ.
Three-day deadline for kanthara team