SUDDILIVE || SHIVAMOGGA
ಇಲಾಖೆಗಳಿಗೆ ಮಾನ ಮರ್ಯಾದೆ ಇದ್ದರೆ ಮೊದಲು ಕ್ರಮ ಜರುಗಿಸಲಿ-can department take action against the culprits
ಶಿವಮೊಗ್ಗದಲ್ಲಿ ಹೇಳುವವರು ಮತ್ತು ಕೇಳುವವರು ಇಲ್ಲದ ಕಾರಣ ಮರಗಳ ಮಾರಣ ಹೋಮ ನಡೆಯುತ್ತಿದೆ. ಸರ್ಕಾರದ ಆಸ್ತಿಗಳನ್ನ ರಕ್ಷಿಸಬೇಕಿದ್ದ ಅರಣ್ಯ ಇಲಾಖೆಯವರು ನಿದ್ದೆಗೆ ಜಾರಿದ ಪರಿಣಾಮ ಸಾರ್ವಜನಿಕರೇ ರೊಚ್ಚಿಗೆದ್ದು ತಡೆಯುವಮತಾಗಿದೆ.
ಅರಣ್ಯ ಇಲಾಖೆಗೆ ಆಗಲಿ ಪಾಲಿಕೆಗಾಗಲಿ ಊರಿನ ಆಸ್ತಿ ಉಳಿಸುವ ಜವಬ್ದಾರಿ ಇಲ್ಲವಾದಾಗ ಊರಿನ ಪರಿಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಇದೂ ಸಹ ಕಾರಣ. ಲಜ್ಜೆ ಗೆಟ್ಟ ಅರಣ್ಯ ಇಲಾಖೆಗೆ ಊರಿನಲ್ಲಿ ಮರಗಳು ಎಷ್ಟಿವೆ ಎಂಬ ಮಾಹಿತಿ ಇದೆಯಾ ಅಥವಾ ಇಲ್ಲವಾ ಎಂಬ ಅನುಮಾನವೂ ಹುಟ್ಟಿದೆ.
ಕಾಡಿನಲ್ಲಿ ಮರದ ಎಲೆ ತೆಗೆದುಕೊಂಡು ಹೋಗಲು ಸಾಧ್ಯವಾಗದ ಕಾನೂನು ಜಾರಿ ಇದೆ. ಆದರೆ ಸಿಟಿಯಲ್ಲಿ ಅದೂ ಯಾವನೋ ಒಬ್ಬ ಖಾಸಗಿ ಗುತ್ತಿಗೆ ದಾರ ಬಂದು ಮರ ಕಡಿಯುತ್ತಾನೆ. ಆದರೆ ಆ ವಿಷಯ ಅರಣ್ಯ ಇಲಾಖೆಗೆ ಆಗಲಿ ಅಥವಾ ಪಾಲಿಕೆಗಾಗಲಿ ಮಾಹಿತಿ ಇರಲ್ಲ. ಹಾಗಾದರೆ ಈ ಎರಡೂ ಇಲಾಖೆಗಳು ಕಡ್ಲೆಬೀಜ ತಿನ್ನಲು ಇವೆಯಾ ಎಂಬ ಅನುಮಾನ ಹುಟ್ಟಿದೆ.
ಶಂಕರ ಮಠ ರಸ್ತೆಯಲ್ಲಿ ಜಾಹೀರಾತು ಪ್ರಕಟ ಮಾಡಲು ಖಾಸಗಿಯವರಿಂದ ಎಲ್ ಇಡಿ ಸ್ಕ್ರೀನ್ ಹಾಕಲಾಗಿದೆ. ಈ ಎಲ್ ಇಡಿ ಸ್ಕ್ರೀನ್ ಗೆ ಮರದ ಕೊಂಬೆಗಳು ಅಡ್ಡಬಂದು ಕಾಣುವುದಿಲ್ಲ ಎಂಬ ಕಾರಣಕ್ಕೆ ಮರವನ್ನೇ ಕಡಿದು ಹಾಕಲಾಗಿದೆ. ಮರ ಕಡಿಯಲು ಅನುಮತಿ ಇದೆಯಾ ಎಂದು ಸ್ಥಳೀಯರು ಕೇಳಲು ಹೋದವರ ಮೆಲೆ ದೌರ್ಜನ್ಯ ನಡೆಸಿದ್ದಾರೆ.
ಹೋಗಲಿ ಈ ಎಲ್ ಇಡಿ ಸ್ಕ್ರೀನ್ ಹಾಕಲು ಪಾಲಿಕೆ ಅನುಮತಿ ಇದೆಯಾ? ಪೊಲೀಸ್ ಅನುಮತಿ ಇದೆಯಾ ಗೊತ್ತಿಲ್ಲ. ಆದರೆ ಸರ್ಕಾರಿ ಆಸ್ತಿ ಕಾಪಾಡಲು ಇರುವ ಸರ್ಕಾರಿ ಇಲಾಖೆಗಳು ಮೈಮರೆತು ನಿದ್ರೆಗೆ ಜಾರಿವೆ. ಇದೇ 10-15 ದಿನಗಳ ಹಿಂದೆ ಬಿಹೆಚ್ ರಸ್ತೆಯಲ್ಲಿರುವ ಚರ್ಚ್ ನ ಎದುರು ಮರವೊಂದು ಕಡಿಯಲಾಗಿತ್ತು. ಪೈ ಇಂಟರ್ ನ್ಯಾಷನಲ್ ಮೇಲೆ ಪ್ರಕರಣ ದಾಖಲಾಗಿತ್ತು. ಇದೇ ರೀತಿ ಗುತ್ತಿಗೆದಾರನ ಮೇಲೆ ಮಾಲೀಕನ ಮೇಲೆ ಇಲಾಖೆಗಳು ಕ್ರಮ ಕೈಗೊಳ್ತಾವಾ ಅಥವಾ ಕುಂಟುನೆಪ ಹೇಳಿಕೊಂಡು ಓಡಾಡುತ್ತಾವಾ ಕಾದುನೋಡಬೇಕಿದೆ.
ಅದರಂತೆ ರಸ್ತೆಯಲ್ಲಿ ಸಂಚರಿಸುವಾಗ ಕಣ್ಣಿಗೆ ಕುಕ್ಕುವ ಎಲ್ ಇಡಿಗಳ ಬಳಕೆ ನಿಷೇಧವಿದೆ. ಇಲ್ಲಿ ಪಾಲಿಕೆ ಅನುಮತಿ ನೀಡಿದೆಯಾ ಅಥವಾ ಇಲ್ಲವಾ ಎಂಬ ಮಾಹಿತಿಯೂ ಹೊರಬರಬೇಕಿದೆ. ದಕ್ಷ ಪಾಲಿಕೆ ಆಯುಕ್ತರು ಬಂದಿದ್ದಾರೆ ಏನು ಮಾಡ್ತಾರೆ ಕಾದು ನೋಡೋಣ
can department take action against the culprits