SUDDILIVE || SHIVAMOGGA
KSRTC ಬಸ್ ನಲ್ಲಿ ಸೀಟು ಹಿಡಿಯಲು ಮುಂದಾದ ಮಹಿಳೆಗೆ ಶಾಕ್-Shock for woman who tried to got for catch the seat in KSRTC bus
ಶಿವಮೊಗ್ಗ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಹಿಳೆ ಒಬ್ಬರ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದ್ದು, ಬಸ್ನ ಸೀಟ್ಹಿಡಿಯಲು ಮುಂದಾದ ಮಹಿಳೆಗೆ ಶಾಕ್ ಆಗಿದೆ.
ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ನಿವಾಸಿ ಪಾಲಾಕ್ಷಮ್ಮ ಎಂಬುವರು ತಮ್ಮ ಮಗಳಿಗೆ ಅಡಮಾನವಿಟ್ಟಿದ್ದ ಒಡವೆಗಳನ್ನು ಬಿಡಿಸಿಕೊಳ್ಳಲು ಹಣ ಬೇಕೆಂದು ಹೇಳಿದ್ದರಿಂದ ತಮ್ಮ ಗ್ರಾಮದ ಬಳಿ ಇರುವ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 1,75,000 ಹಣವನ್ನು ಬಿಡಿಸಿಕೊಂಡು ಜೂನ್ 14ರಂದು ಎನ್ಆರ್ ಪುರದಲ್ಲಿರುವ ಮಗಳ ಮನೆಗೆ ಹೊರಟಿದ್ದು ಕಡೂರಿನಿಂದ ಶಿವಮೊಗ್ಗಕ್ಕೆ ಬಂದು ನಂತರ ಶೃಂಗೇರಿ ಬಸ್ ಹತ್ತಲು ಮುಂದಾಗಿದ್ದರು.
3-15 ರಂದು ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಶೃಂಗೇರಿ ಬಸ್ ಬಂದಿದ್ದು ಬಸ್ನಲ್ಲಿ ಸೀಟು ಹಿಡಿಯಲು ಮಹಿಳೆ ತಮ್ಮ ವ್ಯಾನಿಟಿ ಬ್ಯಾಗ್ ಹಾಕಿದ್ದರು. ನಂತರ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ 1,75,000 ಹಣದ ಕಟ್ಟು ಇರಲಿಲ್ಲ ತಕ್ಷಣ ಗಾಬರಿಯಾಗಿ ಬಸ್ಟ್ಯಾಂಡ್ ನಲ್ಲಿ ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲ. ಬಸ್ ಹತ್ತುವ ಸಮಯದಲ್ಲಿ ವ್ಯಾನಿಟಿ ಬ್ಯಾಗ್ ನಲ್ಲಿದ್ದ 1,75,000 ಕಳ್ಳತನ ವಾಗಿದೆ ಎಂದು ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.