SUDDILIVE || SHIVAMOGGA
ಮತ್ತೆ ಸಂಸದರ ಕಾಲೆಳೆದ ಸಚಿವರು-The minister who dragged the MPs' feet again
ಜಾತಿಗಣತಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ.ಯಾವುದೇ ಸಲಹೆಗಳು ಇದ್ದರೇ ನೇರವಾಗಿ ಮುಖ್ಯಮಂತ್ರಿಗಳಿಗೆ ಆಗಲಿ ಅಥವಾ ನನಗೆ ನೀಡಬಹುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೂಡ ಜಾತಿಗಣತಿ ಮಾಡುತ್ತದೆ. ಈಗ ಮಾಡಿರುವುದು ಹತ್ತು ವರ್ಷಗಳ ಹಿಂದೆ ನಡೆದ ಸರ್ವೇ ಆಗಿದೆ. ಈ ಸರ್ವೇ ಸಾರ್ವಜನಿಕರಿಗೂ ಸಿಗಬೇಕು. ಕಳೆದ ಬಾರಿ ಆದ ನ್ಯೂನ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಈ ಬಾರಿ ನಿವಾರಣೆ ಮಾಡುತ್ತಾರೆ ಎಂದು ಭರವಸೆ ನೀಡಿದರು.
ಕೇಂದ್ರ ಸರ್ಕಾರ ಕೇವಲ ಹತ್ತು ಹನ್ನೇರಡು ಪ್ರಶ್ನೆಗಳನ್ನು ಕೇಳಬಹುದು. ರಾಹುಲ್ ಗಾಂಧಿಯವರ ಒತ್ತಾಯಕ್ಕೆ ಕೇಂದ್ರ ಸರ್ಕಾರ ಜಾತಿಗಣತೆಗೆ ಮುಂದಾಗಿದೆ. ಜನರು ಜಾತಿಗಣತಿ ಬಗ್ಗೆ ಮಾತನಾಡಿದ್ದಾಗ ಎಚ್ಚೆತ್ತುಕೊಂಡು ಜಾತಿಗಣತಿಗೆ ಕೈ ಹಾಕುತ್ತಿದ್ದಾರೆ. ಕರ್ನಾಟಕ ಹಾಗೂ ತೆಲಂಗಾಣ ಮಾಡೆಲ್ ಗಳನ್ನು ನೋಡಿ ಜಾತಿಗಣತಿ ಮಾಡಬೇಕು. ಸಾರ್ವಜನಿಕರು ಕೂಡ ಸರಿಯಾದ ಮಾಹಿತಿ ನೀಡಿ ಎಂದು ಮನವಿ ನೀಡಿದರು.
ಶರಾವತಿ ಮುಳುಗಡೆ ಸಂತ್ರಸ್ಥರ ವಿಚಾರ
ಶರಾವತಿ ಮುಳುಗಡೆ ಸಂತ್ರಸ್ಥರ ಸರ್ವೇ ಈಗ 75% ಮುಗಿದಿದೆ. ಇನ್ನು ಕೇವಲ 25% ಮಾತ್ರ ಉಳಿದಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೂಡ ಒಟ್ಟಿಗೆ ಸಹಕಾರ ಮಾಡುತ್ತಾರೆ. ಸರ್ವೇ ಆಗಿಲ್ಲ ಎಂದ ತಕ್ಷಣ ಭಯಗೊಳ್ಳುವ ಅವಶ್ಯಕತೆ ಇಲ್ಲ. ಎಲ್ಲದೂ ಸರಿಯಾಗುತ್ತದೆ ಎಂದರು.
ಮತ್ತೆ ಸಂಸದರ ಕಾಲೆಳೆದ ಸಚಿವರು.
ವರ್ಗಾವಣೆ ದಂಧೆ ಜಿಲ್ಲೆಯಲ್ಲಿ ಜೋರಾಗಿದೆ ಎಂಬ ವಿಷಯದ ಕುರಿತು ಮಾತನಾಡಿದ್ದ ಸಂಸದ ರಾಘವೆಂದ್ರರಿಗೆ ಟಕ್ಕರ್ ನೀಡಿದ ಸಚಿವರು, ಅವರ ಅಪ್ಪ ಮುಖ್ಯಮಂತ್ರಿ ಆದಗ ನಡೆದಿದನ್ನು ಈಗ ಹೇಳುತ್ತಿದ್ದಾರೆ ಎನ್ನಿಸುತ್ತದೆ.
ಜೋಗ ಅಭಿವೃದ್ಶಿಗೂ ಸಂಸದರ ಮತ್ತು ಅಪ್ಪನ ಮನೆಯಿಂದ ತಂದಿಲ್ಲ.ನಾವು ನಮ್ಮ ಅಪ್ಪನ ಮನೆಯಿಂದನೂ ತಂದಿಲ್ಲ. ಸಿಗಂದೂರಿಗೆ ಸೇತುವೆ ನೀವು ತಂದಿರಬಹುದು ಆದರೆ ಶಿವಮೊಗ್ಗದಿಂದ ಎಷ್ಟು ಟ್ಯಾಕ್ಸ್ ಕೊಟ್ಟಿದ್ದಾರೆ ಎಂಬುದನ್ನು ಲೆಕ್ಕ ಕೊಡಿ. ಅವರಿಗೆ ಕೆಟ್ಟ ಚಾಳಿಯಿದೆ, ಅವರಪ್ಪನ ಮನೆಯಿಂದ ತಂದಿರುವ ತರ ಹೋಗಿ ಟೇಪ್ ಕಟ್ ಮಾಡಲು ನಿಲ್ಲುತ್ತಾರೆ.
ವರ್ಗಾವಣೆಯ ಬಗ್ಗೆ ಮಾತನಾಡಿರುವ ಸಂಸದರು ನಿಮ್ಮಪ್ಪನವರ ಅಧಿಕಾರ ಇದ್ದಾಗ ನೀವು ಮತ್ತು ನಿಮ್ಮ ಸಹೋದರ ಮಾಡಿದ್ದೇನು? ವರ್ಗಾವಣೆಯಲ್ಲೇ ಮುಳುಗಿದ್ದರಾ? ಅದು ನಿಮಗೆ ಕೆಟ್ಟಚಾಳಿಯಿದೆ. ರಾಜ್ಯ ಮಟ್ಟದಲ್ಲಿ ಜನ ನಿಮ್ಮನ್ನ ಸೋಲಿಸಿದ್ದಾರೆ. ಸಂಸದರು ಹುಷಾರ್ ಆಗಿರುವಂತೆ ಎಚ್ಚರಿಸಿದರು.
ಶರಾವತಿ ಸಂತ್ರಸ್ಥರಿಗ ಇವರಿಂದಲ್ಲೇ ನ್ಯಾಯ ಸಿಕ್ಕಿಲ್ಲ. ಅವರ ಸರ್ಕಾರದಲ್ಲಿ ಆದ ಸಮಸ್ಯೆಯನ್ನು ನಾವು ಸರಿಮಾಡಿದ್ದೇವೆ. ಸಿದ್ದರಾಮಯ್ಯರವರು ಇದನ್ನು ಬಹಳ ಸಿರೀಯಸ್ ಆಗಿ ತೆಗೆದುಕೊಳ್ಳುತ್ತಾರೆ. ವಿಧಾನಸಭಾ ಕ್ಷೇತ್ರಕ್ಕೆ ಎರಡು ಕೆಪಿಸಿ ಶಾಲೆಗಳನ್ನು ಸದ್ಯದರಲ್ಲೇ ಆರಂಭವಾಗುತ್ತದೆ ಎಂದರು.
The minister who dragged the MPs' feet again