SUDDILIVE || SHIVAMOGGA
ಜುಲೈ 9 ರಂದು ಪ್ರತಿಭಟನೆ-protest on July 9th
ಕಾರ್ಮಿಕ ಕಾಯ್ದೆಯನ್ನ ರಕ್ಷಿಸದ ಎರಡೂ ಸರ್ಕಾರದ ವಿರುದ್ಧ ಜುಲೈ 9 ರಂದು ಜಿಲ್ಲಾ ಕೇಂದ್ರಗಳಲ್ಲಿ ನಡೆಸುವುದಾಗಿ ಎಲ್ಲಾ ಕಾರ್ಮಿಕ ಸಂಘನೆಗಳು ತೀರ್ಮಾನಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಬಿಸಿಯೂಟದ ನಾರಾಯಣ 9 ಗಂಟೆಯ ಕಾರ್ಮಿಕರ ಅವಧಿಯನ್ನ 12 ಗಂಟೆಗೆ ಏರಿಸಲಾಗಿದೆ. ದಿನಕ್ಕೆ 600 ರೂ. ಇದ್ದರೆ 150-200 ರೂ.ಗೆ ದುಡಿಸಲಾಗುತ್ತಿದೆ.ಬಿಸಿಯೂಟದ ನೌಕರರಿಗೆ ಒಂದು ರೂ. ಹೆಚ್ಚಿಸಿಲ್ಲ. ಬೆಳಿಗೆ 8-30 ಗೆ ಹೋದರೆ 7-30 ವರೆಗೆ ಕೆಲಸ ಮಾಡಿಸಿಕೊಳ್ಳಲಾಗಿದೆ.
ಕೆಲಸದಲ್ಪಿ ವ್ಯತ್ಯವಾಸವಾದರೂ ಮನೆಗೆ ಹೋಗುವ ಅಪಾಯವಿದೆ. ಪಂಚಾಯಿತಿ, ಶಿಕ್ಷಕರ ಅಧಿಕಾರಿಗಳ ಮಾತುಕೇಳುವಂತಾಗಿದೆ. ಸರ್ಕಾರ ತಪ್ಪನ್ನ ತಿದ್ದಿಕೊಳ್ಳಬೇಕು. 23-25 ವರ್ಷ ಕೆಲಸ ಮಾಡಿದವರನ್ನ ಕೈಬಿಡಲಾಗುತ್ತಿದೆ. ಸುಮಾರುಕಡೆ ಮೊಟ್ಟೆ ಕೊಡುತ್ತಿಲ್ಲ. ಅಪೌಷ್ಠಿಕತೆ ತೊಲಗಿಸಲು ಸರ್ಕಾರ ಬದ್ಧವಾಗಿದೆ. ಆದರೆ ಮೊಟ್ಟೆ ಕೊಡುತ್ತಿಲ್ಲ. ಇಲ್ಲಿ ಸರ್ಕಾರದ ಆದೇಶ ಉಲ್ಲಂಘನೆಯಾದರೂ ಕ್ರಮವಿಲ್ಲ. ಆದರೆ ಬಿಸಿಯೂಟದ ಕಾರ್ಯಕರ್ತರ ಮೇಲೆ ಗದಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಸಿಯೂಟ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ನೀಡುವ ವೇತನದಲ್ಲಿ ಹೆಚ್ಚಿಸಬೇಕು. ಎಂಡಿಎಂ ಯೋಜನೆಗೆ ಅನುದಾನ ಹೆಚ್ಚಿಸಬೇಕು. ಬಿಸಿಯೂಟ ನೌಕರರಿಗೆ 26 ಸಾವಿರ ಕನಿಷ್ಠ ವೇತನ ನೀಡಬೇಕು. ಮಾಸಿಕ ಪಿಂಚಣಿ 10 ಸಾವಿರಕೊಡಬೇಕು. ಸಾದಿಲ್ವಾರು ಜಂಟಿಖಾತೆ ಜವಬ್ದಾರಿಯನ್ನ ಮುಖ್ಯ ಅಡುಗೆ ನೌಕರರಿಂದ ಎಸ್ ಡಿಎಂಸಿಗೆ ವರ್ಗಾವಣೆ ಮಾಡಿರುವ ಕ್ರಮ ಪಾಸ್ಸಾಗಬೇಕು. ಸಾದಿಲ್ವಾರು ಖಾತೆ ಮೊದಲಿನಂತೆಯೇ ಬದಲಾಯಿಸಬೇಕು ಎಂಬ26 ಅಂಶದ ಬೇಡಿಕೆಯಿಟ್ಟುಕೊಂಡು ಕೆಲಸಕ್ಕೆ ಗೈರು ಹಾಜರಿಯಾಗಿ ಜುಲೈ 9 ರಂದು ಪ್ರತಿಭಟಿಸುತ್ತಿದೆ ಎಂದು ಎಚ್ಚರಿಸಿದರು.
protest on July 9th