SUDDILIVE || SHIVAMOGGA
ಬಲದಂಡೆ ಸೀಳಿ ಕುಡಿಯುವ ನೀರು ಬಳಕೆ ಬೇಡ-Do not use the right bank water for drinking
ಭದ್ರ ಜಲಾಶಯದ ಬಲದಂಡೆ ಕಾಲುವೆ ನಾಲ್ಕು ಜಿಲ್ಲೆಗೆ ನೀರು ಹರಿಸಲಾಹುತ್ತಿದೆ. ಇದರಲ್ಲಿ ಜಲಜೀವನ್ ಮಿಷಿನ್ ಅಡಿಯಲ್ಲಿ ಚಿತ್ರದುರ್ಗ, ಚಿಕ್ಕಮಗಳೂರಿಗೆ ಕುಡಿಯುವ ನೀರನ್ನ 2½ ಟಿಎಂಸಿ ನೀರು ಕೊಡಬೇಕು ಎಂದು ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಕೆ.ಟಿ.ಗಂಗಾಧರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020 ರಲ್ಲಿ ರಾಜ್ಯ ಸರ್ಕಾರ ಈ ಜಲಜೀವನ್ ಮಿಷನ್ ಗೆ ನೀರು ಹರಿಸಲು ಬಿಆರ್ ಪಿಯಲ್ಲಿರುವ ಜಲಾಶಯದ ಪಕ್ಕದಲ್ಲಿಯೇ ಬಲದಂಡೆಯನ್ನಸೀಳಿ ನೀರು ಹರಿಸುವ ಯೋಜನೆ ಇದಾಗಿರುವುದು ಆತಂಕ ಮೂಡಿಸಿದೆ. ಎರಡು ಜಿಲ್ಲೆಗಳಿಗೆ ಒಂದು ಟಿಎಂಸಿ ನೀರು ಬಳಕೆಯಾಗುತ್ತಿದೆ ಎಂದರು.
ತುಮಕೂರು ಪಾವಗಾಡ, ಮುಳ್ಕಮೂಲು, 216 ಗ್ರಾಮಗಳಿಗೆ ನೀರು ಉಣಿಸಲಾಗುತ್ತಿದೆ. ಒಟ್ಟು 1166 ಹಳ್ಳಿಗಳಿಗೆ ನೀರು ಉಣಿಸಲಾಗುತ್ತಿದೆ. ಬಲದಂಡೆ ಸೀಳಿ ಜಾಕೆವೆಲ್ ಗೆ ತಂದು ಈ ಊರುಗಳಿಗೆ ಪಂಪ್ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕಾಲುವೆಗಳಲ್ಲಿ ನೀರು ಹರಿಸುವುದು ಅಚ್ಚುಕಟ್ಟು ದಾರರಿಗೆ ಮಾತ್ರ. ಕಾಲುವೆ ನೀರನ್ನ ತರೀಕೆರೆಯ ಬಳಿ ವಿಭಾಗಿಸಿದರೆ ಹರಪ್ಪನಹಳ್ಳಿಯ ರೈತನಿಗೆ ನೀರು ತಲುಪುವುದಿಲ್ಲ. ಮಲೆಬೆನ್ನೂರು, ದಾವಣಗೆರೆಜಿಲ್ಲೆಗೆ ನೀರು ಹರಿಯಲ್ಲ. ಇದರಿಂದ ಅಚ್ಚುಕಟ್ಟುದಾರರಿಗೆ ಆತಂಕವಾಗಲಿದೆ. ಅನೇಕ ರೈತರು ಬೆಳೆ ಕಳೆದುಕೊಳ್ಳುವ ಭಯ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಡಿಸಿಎಂ ಡಿಕೆಶಿ ಮಧ್ಯಪ್ರವೇಶಿಸಿ ರೈತರ ಆತಂಕವನ್ನ ನೀಗಿಸಬೇಕು. ಸರ್ಕಾರವೂ ಹಠ ಬಿಟ್ಟು ರೈತರ ಅನುಕೂಲಕ್ಕೆ ಮುಂದಾಗಲಿ. ಜಲಾಶಯದ ಸೈಫನ್ ಸಿಸ್ಟಮ್ ಮೂಲಕ ಕುಡಿಯುವ ನೀರಿಗೆ ಹರಿಸಬೇಕು ಜಲಾಶಯದ ಪಕ್ಕದಲ್ಲೇ ಸೀಳಿ ಜ್ಯಾಕ್ ವೆಲ್ ಗೆ ಬಿಡಲಾಗಿದೆ ಎಂದು ದೂರಿದರು.
use the right bank water for drinking