SUDDILIVE || SHIVAMOGGA
ಕರಡಿ ಬೋನಿಗೆ-Bear trapped
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿಯ ಸರ್ವೆ ನಂಬರ್ 94/3 ರಲ್ಲಿರುವ ಅಡಿಕೆ ತೋಟದಲ್ಲಿಟ್ಟಿದ್ದ ಬೋನಿಕೆ ಕರಡಿಯೊಂದು ಬಿದ್ದಿದೆ. 17 ದಿನಗಳ ಅಂತರದಲ್ಲಿ ಎರಡನೇ ಕರಡಿ ಬೋನಿಗೆ ಬಿದ್ದಿದೆ.
ಹೊಳಲೂರು ಗ್ರಾಮ ಸರ್ವೆ ನಂಬರ್ 94/3 ರ ಮಾಬುಲೇಶ್ ರವರ ಅಡಿಕೆ ತೋಟದಲ್ಲಿ ಕರಡಿಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅರಣ್ಯ ಅಧಿಕಾರಿಗಳಾದ ವಿಜಯಕುಮಾರ್ ಜೆ ರವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳು ವಸಂತ್ ಕುಮಾರ್ ಹಾಗೂ ಗಸ್ತು ಅರಣ್ಯ ಪಾಲಕರಾದ ಕೊಟ್ರೇಶ್ ದಾನಮ್ಮನವರ್ ತಂಡವು ಕರಡಿಯನ್ನು ಹಿಡಿದಿದೆ
Bear trapped