SUDDILIVE || SAGARA
ದನ , ಎಮ್ಮೆ, ಕರುಗಳು ನಗರಕ್ಕೆ ತಂದು ಸರ್ಕಾರದ ವಿರುದ್ಧ ಆಕ್ರೋಶ-Outrage against the government over bringing cattle, buffaloes, and calves to the city
ರೈತರ ಜಾನುವಾರುಗಳು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ನೇತೃತ್ವದಲ್ಲಿ ನಗರಸಭೆ ವ್ಯಾಪ್ತಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಗ್ರಾಮಾಂತರ ಭಾಗದ ರೈತರು ತಮ್ಮ ದನ ಎಮ್ಮೆ ಕರುಗಳನ್ನು ತಂದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ರೈತರ ಸಾಕು ಪ್ರಾಣಿಗಳನ್ನು ರಾಜ್ಯದ ಎಲ್ಲಾ ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡುವುದನ್ನು ನಿರ್ಬಧಿಸಿ ಹೊರಡಿಸಿದ ಆದೇಶವು ರೈತ ವಿರೋಧಿಯಾಗಿದೆ. ತಲ ತಲಾಂತರದಿಂದ ನಮ್ಮ ಸಾಕುಪ್ರಾಣಿಗಳನ್ನು ಕಾಡು ಮೇಡುಗಳಲ್ಲಿ ಮೇಯಿಸಿಕೊಂಡು ಜೀವನ ನಡೆಸುತ್ತಾ ಬಂದಿದ್ದೇವೆ.
ರೈತರು ಮತ್ತು ಅವರ ಸಾಕು ಪ್ರಾಣಿಗಳಿಗೆ ಪ್ರವೇಶ ನಿರ್ಬಂಧಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಆಗ್ರಹಿಸಿದರು.
Outrage against the government over bringing cattle, buffaloes, and calves to the city