SUDDILIVE || SHIVAMOGGA
ಶಕ್ತಿಯಿದ್ದಷ್ಟು ಗ್ಯಾರೆಂಟಿ ನೀಡಬೇಕಿತ್ತು-ಆರಗ-Should have given as much guarantee as possible - Araga
ತುಂಗೆ ಹರಿದಾಗ ಪ್ರತಿವರ್ಷದಂತೆ ಬಾಗಿನ ಅರ್ಪಿಸಲಾಗುತ್ತಿದೆ. ಈ ವರ್ನೂ ತಾಯಿ ಯಾರಿಗೂ ತೊಂದರೆಯಾಗದಂತೆ ತುಂಬಿಹರೆಯಲಿ ಎಂದು ಬಾಗಿನ ಅರ್ಪಿಸಲಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೌರನೌಕರರ ಭರವಸೆ ಈಡೇರಿಸದ ಹಿನ್ನಲೆಯಲ್ಲಿ ಪ್ರತಿಭಟನೆಯಾಗುತ್ತಿದೆ. ಅಭಿವೃಧ್ಧಿ ಶೂನ್ಯವಾಗಿದೆ. ಜನ ಕಣ್ಣೀರು ಹಾಕುತ್ತಿದ್ದಾರೆ. ರಾಜಕೀಯ ತಿಕ್ಕಾಟ ಹೆಚ್ಚಾಗಿದೆ. ಅದಷ್ಟು ಬೇಗ ಸರ್ಕಾರ ತೊಲಗಲಿ ಎನ್ನುವಂತಾಗಿದೆ ಎಂದರು.
ಜನರ ಸುಲಿಗೆ ನಡೆದಿದೆ. ಚುನಾವಣೆ ವೇಳೆ ನೀಡಿದ ಭರವಸೆ ಈಡೇರಿಲ್ಲ. ಗುತ್ತಿಗೆದಾರರಿಗೆ ಹಣ ನೀಡದೆ ಬೀದಿಗೆ ಇಳಿದಿದ್ದಾರೆ. ಎಲ್ಲರೂ ಗ್ಯಾರೆಂಟಿಗೆ ಬೈಯ್ಯುತ್ತಿದ್ದಾರೆ. ಗ್ಯಾರೆಂಟಿ ನೀಡಲು ಶಕ್ತಿಇದ್ದಷ್ಟು ಆಶ್ವಾಸನೆ ನೀಡಬೇಕಿತ್ತು. ಬಿಜೆಪಿ ಗ್ಯಾರೆಂಟಿಯನ್ನ ಬೈಯಲ್ಲ. ಆದರೆ ಅಶಕ್ತರಿಗೆ ಕೊಡಿ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ. ಅದರಂತೆ ನಡೆಯಬೇಕಿತ್ತು ಎಂದರು.
Should have given as much guarantee as possible - Araga