SUDDILIVE || SHIVAMOGGA
ಪೌರ ನೌಕರರ ಸಮಸ್ಯೆಯನ್ನ ಸಿಎಂ ಮಧ್ಯಪ್ರವೇಶದಿಂದ ಮಾತ್ರ ಸಾಧ್ಯ-ಶಾಸಕ ಚೆನ್ನಿ-The problem of civic employees can only be solved with the intervention of the CM - MLA Chenni
ನಗರದಲ್ಲಿ ಪೌರನೌಕರರು ಸ್ವಚ್ಚತೆಯಲ್ಲಿ ತೊಡಗಿದ್ದಾರೆ. ಪೌರನೌಕರರ ಹೋರಾಟ ನ್ಯಾಯಯುತವಾಗಿದೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಷನ್ ಗಳಲ್ಲಿ ಭರವಸೆ ಮಾತ್ರ ಕೊಡಲಾಗುತ್ತಿತ್ತು. ಭರವಸೆ ಈಡೇರದ ಹಿನ್ನಲೆಯಲ್ಲಿ ಸ್ಥಳೀಯ ಸಂಸ್ಥೆಯ ಪೌರ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. ಬೇಡಿಕೆಯನ್ನ ಈಡೇರಿಸುವಂತಹದ್ದಾಗಿದೆ. ಇದು ಸಿಎಂ ಮಧ್ಯ ಪ್ರವೇಶದಿಂದ ಮಾತ್ರ ಸಾಧ್ಯವಾಗಿದೆ. ಈನೌಕರರಿಗೆ ಸಿಆಂಡ್ ಆರ್ ಅಪ್ಲೇ ಆಗಿತ್ತದೆ ಆದರೆ ಸರ್ಕಾರಿ ನೌಕರರು ಅಲ್ಲ ಎಂಬಂತಾಗಿದೆ. ಅನಿರ್ದಿಷ್ಠ ಹೋರಾಟ ನಡೆದರೆ ಸಮಸ್ಯೆಯಾಗಲಿದೆ.
ಈಸಮಸ್ಯೆ ಸಿಎಂ ಮಧ್ಯ ಪ್ರವೇಶಿಸಿದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ. ರಾಜ್ಯ ಸರ್ಕಾರ ಸಂಬಳಕೊಡಿತ್ತಿಲ್ಲ. ಕೇಂದ್ರದ 15 ನೇ ಹಣಕಾಸಿನ ಯೋಜನೆ ಅಡಿ ಹಣ ಬರ್ತಾಯಿದೆ ಅಷ್ಟೆ. ರಾಜ್ಯ ಸರ್ಕಾರಕ್ಕೆ ಇದು ಗೌರವ ತರುವಂತಹದ್ದಲ್ಲ. ಇದನ್ನ ಸಿಎಂ ಗಮನಿಸಲೇ ಬೇಕು ಎಂದರು.
ಸ್ಮಾರ್ಟ್ ಸಿಟಿ ಅಡಿ ನಿರ್ಮಾಣಗೊಂಡ ತುಂಗ ನದಿಯ ವಾಕಿಂಗ್ ಪಾತ್ ನಲ್ಲಿ ಆಟಿಕೆ ಹಾಳಾಗಿದೆ. ಈ ಬಗ್ಗೆ ಅಧಿಕಾರಿಗಳೊಡನೆ ಮಾತನಾಡುವುದಾಗಿ ಶಾಸಕರು ಭರವಸೆ ನೀಡಿದರು. ಉಪಯೋಗ ವಾಗದೆ ಹಾಳಾಗಿದ್ದು ಇದೆ. ಉಪಯೋಗ ಆಗಿ ಹಾಳಾಗಿದ್ದು ಇದೆ. ಕ್ರಮ ಜರುಗಿಸಲಾಗುವುದು ಎಂದರು.
ಮೆಗ್ಗಾನ್ ನಲ್ಲಿ ನೀರಿನ ಕೊರತೆ ಬಗ್ಗೆ ಅಧೀಕ್ಷಕ ಡಿಎಸ್, ಮತ್ತು ನಿರ್ದೇಶಕರ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು.
The problem of civic employees can only be solved with the intervention of the CM - MLA Chenni