ad

ಕಾರ್ಯಕ್ರಮದ ಅಯೋಜನೆ ಮತ್ತು ಆಹ್ವಾನದಲ್ಲಿ‌ ಲೋಪ ಆಗಿದೆ-There was a lapse in the organization and invitation of the event

SUDDILIVE || SAGARA

ಕಾರ್ಯಕ್ರಮದ ಅಯೋಜನೆ ಮತ್ತು ಆಹ್ವಾನದಲ್ಲಿ‌ ಲೋಪ ಆಗಿದೆ-There was a lapse in the organization and invitation of the event.

ಸಿಗಂದೂರು ತೂಗು ಸೇತುವೆ ಉದ್ಘಾಟನೆ ವಿಚಾರದಲ್ಲಿ ಸಾಗರದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮದ ಅಯೋಜನೆ ಮತ್ತು ಆಹ್ವಾನದಲ್ಲಿ‌ ಲೋಪ ಆಗಿದೆ ಎಂದಿದ್ದಾರೆ. 

ಈ ಹಿನ್ನೆಲೆಯಲ್ಲಿ ಸಿಎಂ ನಿನ್ನೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಸೇತುವೆ ನಿರ್ಮಾಣದ ಹಿಂದೆ ರಾಜ್ಯ ಸರ್ಕಾರದ ಪಾತ್ರವೂ ಇದೆ. ಜಾಗದ ಅನುಮತಿ ಸೇರಿದಂತೆ ಬೇರೆ ಬೇರೆ ವಿಷಯದಲ್ಲಿ ರಾಜ್ಯ ಸರ್ಕಾರದ ಕೊಡುಗೆ ಇದೆ. ಹೀಗಿದ್ದೂ ಕಾರ್ಯಕ್ರಮದ ಆಹ್ವಾನ ನೀಡುವುದರಲ್ಲಿ ಲೋಪ ಆಗಿದೆ. ಈ ಸಿಎಂ ಸಿದ್ದರಾಮಯ್ಯ ಈಗಾಗಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ನಾನು ಸ್ಥಳೀಯ ಶಾಸಕರೊಂದಿಗೆ ಚರ್ಚೆ ಮಾಡುತ್ತೇನೆ. ಸ್ಥಳೀಯ ಶಾಸಕರಿಗೂ ತಡವಾಗಿ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಇದೆ ಎಂದು ಅವರು ತಿಳಿಸಿದರು. 

ಈ ಮಧ್ಯೆ ಸಂಸದರು ಸಾಮಾಜಿಕ ಜಾಲತಾಣದಲ್ಲಿ ನಾನು ಜುಲೈ.9 ನೇ ತಾರೀಖೇ ಸಿಎಂಗೆ ಆಹ್ವಾನಿಸಿರುವುದಾಗಿ ಹೇಳಿದ್ದಾರೆ. ಸಿಎಂ ತಡವಾಗಿ ಆಹ್ವಾನಿಸಲಾಗಿದೆ ಎಂದು ಹೇಳಿರುವುದು ನಗೆಪಾಟಲಿಗೆ ಕಾರಣವಾಗಿದೆ. ಅಲ್ಲದೆ ಶಾಸಕ ಗೋಪಾಲ ಕೃಷ್ಣ ಬೇಳೂರು ಸಹ ಸಂಸದರ ವಿರುದ್ಧ ಮುಗಿಬಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close