SUDDILIVE || CHANDRAGUTTI
ವ್ಯಾನ್ ಮೇಲೆ ಉರುಳಿದ ಮರ-Tree fell on van
ಮರವೊಂದು ಧರೆಗೆ ಉರುಳಿದ ಪರಿಣಾಮ ಓಮಿನಿ ವ್ಯಾನ್ ವೊಂದು ಸಂಪೂರ್ಣ ಜಖಂಗೊಂಡಿರುವ ಘಟನೆ ನಿನ್ನೆ ಸೊರಬ ತಾಲೂಕು ಚಂದ್ರಗುತ್ತಿಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿಯ ಸಂತೆ ಮೈದಾನದಲ್ಲಿ ನಡೆದಿದೆ.
ಸಂತೆ ನಡೆಯುವ ವೇಳೆಯೇ ಮರ ಉರುಳಿದೆ. ಮರ ಉರಳಿದ ಪರಿಣಾಮ ಇಬ್ಬರಿಗೆ ಗಾಯವಾಗಿದೆ. ಮರ ಉರುಳಿದ ರಭಸಕ್ಕೆ ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಸಂತೆ ಮಾರ್ಕೆಟ್ ನಲ್ಲಿ ಇನ್ನು ಹಲವು ಮರಗಳು ಇದೇ ರೀತಿ ಉರುಳುವ ಹಂತಕ್ಕೆ ತಲುಪಿದರು ಗ್ರಾಪಂ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ.
Tree fell on van