SUDDILIVE || SHIVAMOGGA
SIT ಬ್ರಹ್ಮನ ಸೃಷ್ಠಿಯಲ್ಲ-SIT is not a creation of Brahma-Chenni
ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಶಾಸಕ ಚೆನ್ನಿ ಧರ್ಮಸ್ಥಳದ ಕುರಿತು ಹಾಗೂ ಹಿಂದುಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ಕುರಿತು ಮಾತನಾಡಿದ್ದಾರೆ.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ನಗರ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ ಹಿಂದುಗಳ ದಬ್ಬಾಳಿಕೆ ಕುರಿತು ಮಾತನಾಡಿದ್ದಾರೆ ಹಿಂದೂಗಳ ಮೇಲೆ ದಬ್ಬಾಳಿಕೆಯು ನೆನ್ನೆ ಮೊನ್ನೆ ಅದಲ್ಲ ತಿರುಪತಿ ಶಬರಿಮಲೆ ಹಾಗೂ ಮಹಾರಾಷ್ಟ್ರ ಶನಿ ಶಿಂಗನಪುರ್ ಗಳಲ್ಲಿ ನಡೆದಿದ್ದ ಹಿಂದುಗಳ ಮೇಲಿನ ದಾಳಿ ಈಗ ಧರ್ಮಸ್ಥಳದ ಕಡೆಗೆ ಮುಖಮಾಡಿದೆ.
ಹಿಂದುಗಳ ಮೇಲಿನ ದಾಳಿಗೆ ಮುಸ್ಲಿಂ ಸಂಘ ಮುಸ್ಲಿಂ ಸಮುದಾಯ ಮಾತ್ರ ಕಾಯುತ್ತಿಲ್ಲ ಹಿಂದುಗಳಲ್ಲಿಯೇ ಅನೇಕರು ಇಂದು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಅವರಿಂದಲೂ ನಮಗೆ ಅಪಾಯವಿದೆ ಎಂದು ಈ ವೇಳೆ ಗುಡುಗಿದ್ದಾರೆ.
ಏಳು ಬಟ್ಟೆಗಳ ಒಡೆಯ ತಿರುಪತಿಯಲ್ಲಿ ಮೊದಲಿಗೆ ನಾಲ್ಕು ಬೆಟ್ಟಗಳು ಕ್ರಿಶ್ಚನ್ ಸಮುದಾಯಕ್ಕೆ ಸೇರಿದ್ದವು ಎಂದು ಹಬ್ಬಿಸಲಾಯಿತು ನಂತರ ಅಲ್ಲಿನ ಮೂರ್ತಿಗಳ ತಿರುಪತಿ ವೆಂಕಟರಮಣ ಮೂರ್ತಿಯನ್ನೇ ಬೇರೆ ಮೂರ್ತಿ ಎಂದು ಬಿಂಬಿಸಲಾಗಿತ್ತು ನಂತರ ಪ್ರಸಾದಕ್ಕೆ ಲಗ್ಗೆ ಇಡಲಾಯಿತು ನಂತರ ಶಬರಿಮಲೆ ನಂತರ ಶನಿ ಶನಿಸಿಂಗನಾಪುರ ದಲ್ಲಿ ದಾಳಿ ನಡೆದಿದೆ.
ಹೀಗಾ ಧರ್ಮಸ್ಥಳಕ್ಕೆ ಎಡಚರರ ದಾಳಿ ಗಂಭೀರವಾಗಿದೆ ಧರ್ಮಸ್ಥಳದಲ್ಲಿ ಊತೂಹಾಕಲಾಗಿರುವ ಶವಗಳ ಉತ್ಕನ ಹೆಸರಿನಲ್ಲಿ ಇಡೀ ಧರ್ಮಸ್ಥಳವನ್ನೇ ಆಗಿದು ಬಗೆಯಲಾಗುತ್ತಿದೆ ಇಲ್ಲಿನ ಟಾರ್ಗೆಟ್ ಧರ್ಮಾಧಿಕಾರಿ ಮತ್ತು ದೇವಸ್ಥಾನವೇ ಹೊರತು ಯಾವ ಶವವನ್ನು ಬುರುಡೆಯನ್ನು ತೆಗೆಯುವ ಉದ್ದೇಶ ಯಾರಿಗೂ ಇಲ್ಲ ಎಂದು ಪರೋಕ್ಷವಾಗಿ ನುಡಿದರು.
ಎಸ್ಐಟಿ ಬ್ರಹ್ಮನ ಸೃಷ್ಟಿಯಲ್ಲ ಇದು ಸಿದ್ದರಾಮಯ್ಯನವರ ಮೂಗಿನ ನೇರಕ್ಕೆ ಇರುವ ತನಿಕ ಸಂಸ್ಥೆಯಾಗಿದೆ. ಇಲ್ಲಿ ಯಾವುದೇ ಸತ್ಯಂ ಶಗಳು ಹೊರಬೀಳಲಿದೆ ಎಂಬ ವಿಶ್ವಾಸ ಕಡಿಮೆ ಇದೆ, ಇಲ್ಲೇನು ಸಿಗದಿದ್ದರೂ ಇಲ್ಲಿ ಏನೋ ಸಿಕ್ಕಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದರು ಅಚ್ಚರಿ ಪಡುವಂತಿಲ್ಲ ಎಂದು ಹೇಳಿದರು.
ರಕ್ಷಾ ಬಂಧನ ಕೇವಲ ನೂಲಿನ ಹಬ್ಬವಲ್ಲ ಇದು ಸಂಬಂಧವನ್ನು ಬೆಸೆಯುವ ಹಬ್ಬ ಈ ಹಬ್ಬವನ್ನು ಪ್ರತಿ ಹಿಂದುಗಳು ತಮ್ಮ ಮನೆ ಮನೆಗಳಲ್ಲಿ ಆಚರಿಸಬೇಕು ಆಚರಿಸುವ ಮೂಲಕ ಒಗ್ಗಟ್ಟಾಗಬೇಕು ಎಂದು ಶಾಸಕರು ಕರೆ ನೀಡಿದರು