SUDDILIVE || BHADRAVATHI
ವಿವಾಹಿತ ಮಹಿಳೆಗಾಗಿ ಆಕೆಯ ಪತಿಯನ್ನ ಕೊಲ್ಲುವ ಯತ್ನ-ಆರೋಪಿಗೆ ಶಿಕ್ಷೆ ಪ್ರಕಟ-Sentence announced for accused of attempting to kill married woman's husband
![]() |
ಆರೋಪಿ ಕಿರಣ್ ನಾಯ್ಕ್ |
ವಿವಾಹಿತ ಮಹಿಳೆಯ ಸಂಪರ್ಕವನ್ನು ಹೊಂದಲು ಆಕೆಯ ಪಾತಿಯನ್ನೇ ಹತ್ಯೆ ಮಾಡಲು ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆ ಅನುಭವಿಸಲಾಗಿದೆ ಇಂದು ತೀರ್ಪು ನೀಡಿದ್ದು ಆರೋಪಿ ಕಿರಣ ವಿರುದ್ಧ 25000 ದಂಡ ಹತ್ತು ವರ್ಷಗಳ ಕಾರ್ಯಕ್ರಮ ಶಿಕ್ಷೆನು ವಿಧಿಸಿ ತೀರ್ಪು ನೀಡಿದೆ.
2022 ನೇ ಇಸ್ವಿಯ ಮೇ 14ರಂದು ರಾತ್ರಿ ಆರೋಪಿ ಕಿರಣ್ ಎಂಬಾತನು ಯಲವಟ್ಟಿ ಗ್ರಾಮದಲ್ಲಿರುವ ಕುಮಾರನಾಯ್ಕನ ಮನೆಯೊಳಗೇ ನುಗ್ಗಿ ಮಲಗಿಕೊಂಡಿದ್ದ ಕುಮಾರನಾಯಕನನ್ನೇ ಆಯುಧಗಳಿಂದ ಕೊಲೆ ಮಾಡಲು ಯತ್ನಿಸಿ, ಪರಾರಿಯಾಗಿದ್ದ ಆರೋಪಿ ಕಿರಣ್ ವಿರುದ್ಧ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಯಲವಟ್ಟಿ ನಿವಾಸಿ ಕುಮಾರ್ ನಾಯಕ್ ಭದ್ರಾವತಿ ತಾಲೂಕಿನ ರಾಮೇನಕೊಪ್ಪದ ನಿವಾಸಿ ಕಾವ್ಯ ಎಂಬುದನ್ನು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರಿಗೂ ಮಕ್ಕಳಾಗಿತ್ತು. ಎಲವಟ್ಟಿ ಗ್ರಾಮದಲ್ಲಿ ವಾಸವಾಗಿದ್ದ ವೇಳೆ ಕಾವ್ಯ ಕಿರಣ್ ನಾಯಕ್ ಎಂಬುವನ ಜೊತೆ ಸಂಬಂಧಪಟ್ಟ ಈ ಪ್ರಕರಣ ಭದ್ರಾವತಿಯ ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು ಪ್ರಕರಣದಲ್ಲಿ ಓಡಿಹೋದ ಪತ್ನಿ ಮತ್ತು ಕಿರಣ್ ಇಬ್ಬರು ಪತ್ತೆಯಾಗಿದ್ದರು.
ಆದರೆ ಈ ಪ್ರಕರಣದಲ್ಲಿ ಕಾವ್ಯರ ತಾಯಿ ಮೂಲಕ ಕಿರಣ್ ಮತ್ತೆ ಸಂಪರ್ಕ ಸಾಧಿಸಲು ಯತ್ನಿಸಿದ್ದನು. ಇದನ್ನಗಮನಿಸಿದ್ದ ಕುಮಾರ್ ನಾಯ್ಕ್ ಮೊಬೈಲ್ ನಲ್ಲೇ ಬೈದಿದ್ದನು.ಬೈದ ಮರುದಿನವೇ ಕಿರಣ್ಬರಾತ್ರಿ ಮಲಗಿದ್ದ ವೇಳೆ ಅವರ ಮನೆಗೆ ನುಗ್ಗಿ ಪೇಪರ್ ಕಟ್ ಮಾಡುವ ಸಣ್ಣ ಚಾಕುವಿನಿಂದ ಕುಮಾರ್ನಾಯಕನ ಕುತ್ತಿಗೆ ಕೆನ್ನೆ ಎಡಭಾಗ ಎಡಗಡೆ ಹಣೆಯ ಮೇಲೆ ಕೋಜಿ ಇದ್ದನು ಈ ಪ್ರಕರಣ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಏಎಸ್ಐ ಅರುಣ್ ಕುಮಾರ್ ತನಿಕ ಸಹಾಯಕರಾಗಿದ್ದ ಮೋಹನ್ ಕುಮಾರ್ ಅವರು ನೀಡಿದ್ದ ದೋಷಾರೋಪಣ ಪಟ್ಟಿಯ ಮೇಲೆ ಇಂದು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಧಾ ಇಂದಿರಾ ಮೈಲಸ್ವಾಮೀ ಚೆಟ್ಟಿ ಯಾರು ಆರೋಪಿಗೆ ಹತ್ತು ವರ್ಷ ಕಾರ್ಯಗ್ರಹವಾಸ 26,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಸರ್ಕಾರಿ ಅಭಿಯೋಜಕರಾಗಿ ಶ್ರೀಮತಿ ರತ್ನಮ್ಮ ಭಾಗ ಮಂಡಿಸಿದ್ದರು.
attempting to kill married woman's husband