ಶಾಂತಿ ಕದಡುವವವರ ವಿರುದ್ಧ ಕಾನೂನು ಕ್ರಮಕ್ಕೆ SDPI ಆಗ್ರಹ-SDPI demands legal action against those disturbing the peace

 SUDDILIVE || SHIVAMOGGA

ಶಾಂತಿ ಕದಡುವವವರ ವಿರುದ್ಧ ಕಾನೂನು ಕ್ರಮಕ್ಕೆ SDPI ಆಗ್ರಹ-SDPI demands legal action against those disturbing the peace


ಶಿವಮೊಗ್ಗ ಜಿಲ್ಲೆಯಾದ್ಯಂತ ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಶಾಂತಿ ಸೌಹಾರ್ದತೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು, ಆದರೆ ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆಯ ವಿಡಿಯೋ ತಿರುಚಿಸಿ ಹಿಂದೂ ಮುಸ್ಲಿಂ ಸಮುದಾಯಗಳ ಮಧ್ಯೆ ದ್ವೇಷ ಹುಟ್ಟಿಸುವ ಹಾಗೂ ಅಮಾಯಕರನ್ನು ಈ ಷಡ್ಯಂತ್ರದಲ್ಲಿ ಸಿಲುಕಿಸಿ ಈದ್ ಮಿಲಾದ್ ಹಬ್ಬ ಆಚರಿಸಿದ ಮುಸ್ಲಿಂ ಸಮುದಾಯಕ್ಕೆ ಕೆಟ್ಟು ಹೆಸರು ತಂದು ಮುಸ್ಲಿಮರ ವಿರುದ್ಧ ಅನ್ಯಧರ್ಮಿಯರನ್ನು ಎತ್ತಿ ಕಟ್ಟಿ ಅಶಾಂತಿ ಉಂಟು ಮಾಡಿ ಮುಸ್ಲಿಂ ಸಮುದಾಯದ ವಿರುದ್ಧ ಹೇಳಿಕೆ ನೀಡಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಎಸ್ ಡಿಪಿಐ ಭದ್ರಾವತಿ ಘಟಕ ಆಗ್ರಹಿಸಿದೆ. 

ಭದ್ರಾವತಿಯ ಈದ್ ಮಿಲಾದ್ ವಿಡಿಯೋ ತಿರುಚಿ ಷಡ್ಯಂತ್ರ ನಡೆಸಿ ಶಾಂತಿ ಕೆದಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಜಿಲ್ಲಾ ಸಮಿತಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ನೀಡಿದ್ದು ಶಾಂತಿ ಕದಡುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದೆ. 

ಕೋಮು ದ್ವೇಷ ಉಂಟು ಮಾಡಿ ಒಂದು ಸಮುದಾಯದ ವಿರುದ್ಧ ಹೇಳಿಕೆ ನೀಡುತ್ತ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರು ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಊಹಾ ಪೂಹಗಳಿಗೆ ಕಿವಿ ಕೊಡದೆ ಸರ್ವ ಜನಾಂಗದ ಶಾಂತಿಯ ತೋಟದಂತಿರು ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಬಯಸುವ ಪ್ರಜ್ಞಾವಂತ ನಾಗರಿಕರು ಹಬ್ಬಗಳಲ್ಲಿ ಸೌಹಾರ್ದ ಬಯಸಬೇಕಾಗಿದೆ ಎಂದು ಎಸ್ ಡಿಪಿಐ ನ ಮೊಹಮದ್ ಗೌಸ್ ಮನವಿ ಮಾಡಿದ್ದಾರೆ. 

SDPI demands legal action against those disturbing the peace

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close