ad

ಬಸವ ತತ್ವ ಮತ್ತು ಲಿಂಗಾಯತ ಸಮಾಜದಲ್ಲಿ ಭಿನ್ನತೆ ತರುವ ಯತ್ನಕ್ಕೆ ಹೆಚ್ ಸಿ ಯೋಗೇಶ್ ತೀವ್ರ ವಿರೋಧ-HC Yogish strongly opposes

SUDDILIVE || SHIVAMOGGA

ಬಸವ ತತ್ವ ಮತ್ತು ಲಿಂಗಾಯತ ಸಮಾಜದಲ್ಲಿ ಭಿನ್ನತೆ ತರುವ ಯತ್ನಕ್ಕೆ ಹೆಚ್ ಸಿ ಯೋಗೀಶ್ ತೀವ್ರ ವಿರೋಧ-HC Yogish strongly opposes Basava Tattva and attempts to create division in Lingayat society

Yogish, oppose



ಮಾಜಿ ಡಿಸಿಎಂ ಈಶ್ವರಪ್ಪನವರು ಕನೇರಿ ಶ್ರೀಗಳ ಪರವಾಗಿ ಬ್ಯಾಟ್ ಬೀಸುತ್ತಿದ್ದು ಅದರ ವಿರುದ್ಧ ಹೆಚ್.ಸಿ ಯೋಗೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನೇರಿ ಶ್ರೀಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯು ಅದು ಕೇವಲ ವ್ಯಕ್ತಿಗತ ಪ್ರತಿಭಟನೆ ಆಗಿರದೆ ಬಸವ ತತ್ವದ ವಿರುದ್ಧದ ಹೇಳಿಕೆಯ ವಿರುದ್ಧ ವಾಗಿದೆ ಎಂದು ಯೋಗೇಶ್ ಪತ್ರಿಕ ಪ್ರಕಟಣೆ ಹೊರಡಿಸಿದ್ದಾರೆ

ಇತ್ತೀಚೆಗೆ ಶ್ರೀ ಕೆ. ಎಸ್. ಈಶ್ವರಪ್ಪ ಅವರು ಕನೇರಿ ಶ್ರೀ ವಿವಾದದ ಬಗ್ಗೆ ನೀಡಿರುವ ಹೇಳಿಕೆಗಳು ಸಂಪೂರ್ಣ ಪಿತೂರಿಯಾಗಿದೆ ಮತ್ತು ಇದೇ ವೇಳೆ ಲಕ್ಷಾಂತರ ಬಸವ ತತ್ವ ಅನುಯಾಯಿಗಳು ಹಾಗೂ ಲಿಂಗಾಯತ ಶರಣರ ನೋವಿನಲ್ಲಿ ಹುಟ್ಟಿದ ನ್ಯಾಯಸಮ್ಮತವಾದ ಹೋರಾಟವನ್ನು ದುರುಪಯೋಗಪಡಿಸಿಕೊಳ್ಳಲು ರಾಜಕೀಯವಾಗಿ ಪ್ರಯತ್ನಿಸಿದ್ದಾರೆ. ಕನೇರಿ ಶ್ರೀಗಳು ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ಮತ್ತು ಶರಣರನ್ನು ಅನುಚಿತವಾಗಿ ಟೀಕೆ ಮಾಡಿದ್ದು, ಅಸಂವಿಧಾನಕ ಪದಗಳನ್ನು ಬಳಸಿದ್ದಾರೆ ಮತ್ತು ಪ್ರಸ್ತುತ ಹೋರಾಟಗಳು ನಾಟಕ ಎಂದು ಹೇಳಿದ್ದಾರೆ. 

ಒಬ್ಬ ಜವಾಬ್ದಾರಿಯುತ ಸ್ವಾಮೀಜಿಯಿಂದ ಇದನ್ನು ನಿರೀಕ್ಷಿಸಲಾಗದು. ಇದನ್ನು ರಾಜ್ಯದ ನೂರಾರು ಬಸವ ಸಂಘ ಸಂಸ್ಥೆಗಳು, ಮಠಾಧೀಶರು ಹಾಗು ಅನೇಕ ಭಕ್ತರು ಪ್ರಬಲವಾಗಿ ವಿರೋಧಿಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಬೆಳಗಾವಿ, ವಿಜಯಪುರ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಯಲ್ಲಿ ಹೋರಾಟಗಳಿವೆ, ಪ್ರತಿಭಟನೆಗಳು ನಡೆಯುತ್ತಿವೆ. ಪರಿಸ್ಥಿತಿಯ ನಿರ್ವಹಣೆಗಾಗಿ ಜಿಲ್ಲಾಡಳಿತ ತಾತ್ಕಾಲಿಕ ಪ್ರವೇಶ ನಿರ್ಬಂಧ ಕೈಗೊಂಡಿದೆ. ಕನೇರಿ ಶ್ರೀಗಳು, ಲಿಂಗಾಯತ ಮಠಾಧೀಶರು ಹಾಗೂ ಬಸವ ತತ್ವದವರನ್ನು ಅವಹೇಳನ ಮಾಡಿದ ಪರಿಣಾಮ, ರಾಜ್ಯದಾದ್ಯಾಂತ ಭಕ್ತರು, ಪ್ರತಿಭಟನಾಕಾರರು ಅವರ ಉಪಸ್ಥಿತಿಯನ್ನು ತಿರಸ್ಕರಿಸುತ್ತಿದ್ದಾರೆ. ಕನೇರಿ ಶ್ರೀ ಆಡಿರುವ ಮಾತುಗಳನ್ನು ಸಮರ್ಥಿಸುವ ಮೂಲಕ ಈಶ್ವರಪ್ಪ ಅವರು ಬಸವಣ್ಣನ ತತ್ವಕ್ಕೂ ಹಾಗೂ ಸಮಾನತೆ-ಧರ್ಮಾಧಾರಿತ ಭಾವನೆಗೂ ಅಪಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈಶ್ವರಪ್ಪ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಲಿಂಗಾಯತ-ಬಸವ ಸಮಾಜದಲ್ಲಿ ವಿಭಜನೆ ಮಾಡಲು ಯತ್ನಿಸುತ್ತಿದ್ದಾರೆ. ಇಂತಹ ವಿವಾದಿತ ಹೇಳಿಕೆಗಳು ಹಿಂದಿನಿಂದಲೂ ರಾಜ್ಯದ ಸಮಾಜ ಪರಿವರ್ತಕರ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಅವಮಾನಿಸುತ್ತ ಬಂದಿವೆ.

ಲಿಂಗಾಯತ ಹಾಗೂ ಬಸವ ಅನುಯಾಯಿಗಳ ಏಕತೆ ಅಪಾರ ಶಕ್ತಿಯಾಗಿದೆ — ಇದನ್ನು ಯಾರೂ ಐದು ದಿನದ ರಾಜಕೀಯ ಪ್ರಯೋಜನಕ್ಕಾಗಿ ಮುರಿಯಲು ಸಾಧ್ಯವಿಲ್ಲ. ಯಾವುದೇ ನಾಯಕ ಅಥವಾ ರಾಜಕಾರಣಿ ಸಮಾಜದಲ್ಲೊಂದು ಬಿರುಕು ಉಂಟು ಮಾಡಲು ಅಥವಾ ಬಸವ ತತ್ವವನ್ನು ರಾಜಕೀಯವಾಗಿ ಬಳಸಲು ಮುಂದಾದರೆ ಅದಕ್ಕೆ ಬಲವಾದ ಪ್ರತಿರೋಧ ಎದುರಾಗುತ್ತದೆ. ಕನೇರಿ ಶ್ರೀ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಯಾವುದೇ ಧರ್ಮ ಅಥವಾ ವ್ಯಕ್ತಿಯ ವಿರುದ್ಧವಲ್ಲ; ಅದು ಸದಾ ಬಸವಣ್ಣನ ತತ್ವ, ಶರಣ ಸಂಸ್ಕೃತಿಯ ಗೌರವಕ್ಕಾಗಿ, ಮನೋಭಾವನೆಗಾಗಿ, ನ್ಯಾಯಕ್ಕಾಗಿ ನಡೆಯುತ್ತಿವೆ. ಸರ್ಕಾರ ಇದನ್ನು ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ

ಇಂತಹ ಪ್ರಯತ್ನಗಳನ್ನು ಶ್ರೀ ಈಶ್ವರಪ್ಪನವರು ಬಿಡಬೇಕು ಮತ್ತು ಬಸವ ತತ್ವ ಹಾಗೂ ಶರಣ ಸಂಸ್ಕೃತಿಗೆ ಗೌರವ ಕೊಡಬೇಕು ಎಂದು ಯೋಗೇಶ್ ಆಗ್ರಹಿಸಿದ್ದಾರೆ. 

HC Yogish strongly opposes

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close