SUDDILIVE || SHIVAMOGGA
ವೋಟ್ ಚೋರಿ ಕುರಿತು ಜನಜಾಗೃತಿಗೆ ಕಾಂಗ್ರೆಸ್ ಮುಂದಾಗಿದೆ-ಭಂಡಾರಿ-Congress is taking initiative to create awareness about vote theft - Bhandari
ಕಾಂಗ್ರೆಸ್ ಗೆ ಬರುವ ಮತಗಳನ್ನ ಗುರುತಿಸಿ ಮತದಾರಪಟ್ಟಿಯಿಂದ ಮತದಾರನ್ನ ಡಿಲೀಟ್ ಆಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಚೋರಿಯಿಂದ ಅಧಿಕಾರಕ್ಕೆ ಹಿಡಿದಿರುವ ಅಧಿಕಾರ ಪಕ್ಷ ಗದ್ದುಗೆ ಬಿಡಿ. ಗೆದ್ದಾಗ ಕೇಳದ ಕಾಂಗ್ರೆಸ್ ಸೋತಾಗೆ ಕೇಳುತ್ತಾರೆ ಎಂಬುದರ ಬಗ್ಗೆ ಸಾಮಾನ್ಯರಲ್ಲಿ ಅನಿಸಬಹುದು. ಆದರೆ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುವುದನ್ನ ನಮ್ಮ ಉದ್ದೇಶ ಎಂದರು.
ಇದಕ್ಕಾಗಿ ಅಭಿಯಾನ ದೇಶಾದ್ಯಂತ ನಡೆಯುತ್ತದೆ. ಮತದಾರನ್ನ ಜಾಗೃತಿ ಮಾಡಲಾಗುತ್ತಿದೆ. ವಿಡಿಯೋ ಫೂಟೇಜ್ ತೆಗದರೂ ಸಾರ್ವಜನಿಕರಿಗೆ ಕೊಡಿತ್ತಿಲ್ಲ ಏಕೆ? ಪ್ರಜಾಪ್ರಭುತ್ವವನ್ನ ಉಳಿಸಬೇಕಿದೆ. ವ್ಯವಸ್ಥಿತವಾಗಿ ಮತದಾನ ಸಿಗುತ್ತಿಲ್ಲ.
ಮುಖ್ಯನ್ಯಾಯಾಧೀಶರ ವಿರುದ್ಧ ಚಪ್ಪಲಿ ಎಸೆದಾಗ ಪ್ರಧಾನಿಯವರು ಸ್ಟೇಟ್ ಮೆಂಟ್ ಮಾಡಿ ಸುಮ್ಮನಾದರು. ರಾಷ್ಟ್ರಗೀತೆ ಬ್ರಿಟೀಶ್ ರನ್ನ ಮೆಚ್ಚಿಸಲು ಎಂದು ಎಂಪಿ ಕಾಗೇರಿ ಮಾತನಾಡಿದ್ದಾರೆ. ಇದು ಬಿಜೆಪಿ ಕೊಡುವ ಮರ್ಯಾದೆಯಾ? ಯಾವ ಮನೋಔಅವನೆ ಹೊಂದಿದ್ದೀರಿ. ಸಭಾಪತಿ ಸ್ಥಾನದಲ್ಲಿ ಕುಳಿತು ಕಾಗೇರಿಯವರು ಆರ್ ಎಸ್ ಎಸ್ ನಿಂದ ಬಂದವರು ಎಂದು ಹೇಳಿದ್ದಾರೆ.
ನ್ಯಾಯಾಧೀಶರ ವಿಶಾಲ ಹೃದಯ ಹೊಂದಿದ್ದರಿಂದ ಚಪ್ಪಲಿ ಎಸೆದವರ ವಿರುದ್ಧ ಕ್ರಮ ಬೇಡ ಎಂದರು. ಅದೇ ಅಲ್ಪಸಂಖ್ಯಾತರು ಎಸೆದಿದ್ದರೆ ಹೇಗಾಗುತ್ತಿತ್ತು. ಹಾಗಾಗಿ ಈ ಬಗ್ಗೆ ಕಾಂಗ್ರೆಸ್ ಜಾಗೃತಿ ಮೂಡಿಸಲಿದೆ. ವೋಟ್ ಚೋರಿ ಕುರಿತು 1.5 ಲಕ್ಷ ಸಹಿ ಸಂಗ್ರಹಿಸಲಾಗಿದೆ 1.5 ಕೋಟಿ ರಾಜ್ಯದಲ್ಲಿ ಸಹಿಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು ಎಂದರು.
Congress is taking initiative to create awareness about vote theft - Bhandari
