SUDDILIVE || SHIVAMOGGA
ಮತ್ತೆ ಐತಿಹಾಸಿಕ ಪಾದಯಾತ್ರೆಗೆ ಧುಮುಕುತ್ತಿರುವ ಪ್ರಣವಾನಂದ ಶ್ರೀಗಳು-Pranavananda Sri is embarking on a historic pilgrimage again
ಮತ್ತೆ ಕಲ್ಬುರ್ಗಿಯ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಪೀಠಾಧಿಪತಿಗಳಾದ ಡಾ.ಶ್ರೀ ಪ್ರಣಾವಾನಂದ ಸ್ವಾಮೀಜಿಪಾದಯಾತ್ರೆ ಆರಂಭಿಸುತ್ತಿದ್ದಾರೆ. 18 ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ 41 ದಿನಗಳ 700 ಕಿಮಿ ದೂರದ ಐತಿಹಾಸಿಕ ಪಾದಯಾತ್ರೆ ನಡೆಸಲಾರಂಭಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಶ್ರೀಗಳು, ಕರದಾಳದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಬಡೆಸಲಾಗುತ್ತಿದೆ. ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಬಿಡುಗಡೆ ಮಾಡಬೇಕು. ಕಲ್ಯಾಣ ಕರ್ನಾಟಕದಲ್ಲಿ ಕುಲಕಸಬು ಕಳೆದುಕೊಂಡ ಕುಲಬಾಙಧವರಿಗೆ ತಲಾಕುಟುಂಬಕ್ಕೆ ಐದು ಎಕರೆ ಪರಹಾರವಾಗಿ ಜಮೀನು ನೀಡಬೇಕು. 2 ಎಯಿಂದ ಎಸ್ಟಿ ಸಮುದಾಯಕ್ಕೆ ಸೇರಿಸಬೇಕು. ಬೆಂಗಖೂರಿನ ವಿಧಾನ ಸೌಧದ ಮುಂದೆ ಬ್ರಹ್ಮಶ್ರೀ ನಾರಾಯಣಗುರುಗಳ ಪುತ್ಥಳಿ ನಿರ್ಮಿಸಬೇಕು ಎಂಬುದು ಸೇರಿದಂತೆ ವಿವಿಧ 18 ಬೇಡಿಕೆಗಳನ್ನ ಈಡೇರಿಸುವಂತೆ ಪಾದಯಾತ್ರೆಯಲ್ಲಿ ನಡೆಸಲಾಗುತ್ತಿದೆ ಎಂದರು.
ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಾದಯಾತ್ರೆ ಹೊರತುಪಡಿಸಿ ಸರ್ಕಾರದಲ್ಲಿ ಈಡಿಗ ಸಮಾಜವನ್ನ ಕಡೆಗಣಿಸಲಾಗಿದೆ. ಈಗಲಾದರೂ ಸರ್ಕಾರ ಪುನರ್ ರಚನೆಯ ವೇಳೆ ಈಡಿಗ ಸಮಾಜದವರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು. ಮಧುವನ್ನ ಉಳಿಸಿಕೊಂಡು ಎರಡು ಸಚಿವ ಸ್ಥಾನ ಈಡಿಗರಿಗೆ ನೀಡಬೇಕು. ಬಿಜೆಪಿಯ ರಾಜ್ಯಾಧ್ಯಕ್ಷರಾದ ಮೇಲೆ ಬಿ.ವೈ ವಿಜೇಂದ್ರ ಈಡಿಗ ದೀವರನ್ನ ಕಡೆಗಣಿಸುತ್ತಿದ್ದಾರೆ ಎಂದು ಪ್ರಣವಾನಂದ ಶ್ರೀಗಳು ಗುಡುಗಿದ್ದಾರೆ.
ನ ಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದು 12 ವರ್ಷವಾಗಿದೆ. ಹಿಂದೂ, ದೇವಸ್ಥಾನಗಳನ್ನ ಹೆಸರಿನಲ್ಲಿ ಅಧಿಕಾರ ನೀಡಿದ್ದಾರೆ. ಧರ್ಮಕ್ಕಾಗಿ ಸ್ವಾಮೀಜಿಗಳು ಟೋಲ್ ಗಳಲ್ಲಿಉಚಿತವಾಗಿ ಬಿಡಬೇಕು. ಸ್ವಾಮೀಜಿಗಳು ಸಾಲಾಗಿ ನಿಂತು ತಪಾಸಣೆಗೆ ಒಳಗಾಗಬೇಕು. ಇದನ್ನೂ ವಿಮಾನ ನಿಲ್ದಾಣದಲ್ಲಿ ಮುಜುಗರವಾಗಿದ್ದು ಇದೆ ಇದನ್ನೂ ತೆಗೆಯಬೇಕೆಂದರು.
ಸಚಿವ ಸಂಪುಟದಲ್ಲಿ ಮಧು ಬಂಗಾರಪ್ಪನವರ ವಿರುದ್ಧವಿಲ್ಲ. ಹೆಚ್ಚುಕಡಿಮೆ ಆದಾಗ ಏರುಪೇರಾಗಿದೆ. ಮಧುವರು ನಮ್ಮವರೆ ಅವರಿಗೆ ಅನ್ಯಾಯವಾದರೆ ಮೊದಲು ಬರೋರು ನಾವೇ. ಭಿನ್ನಾಭಿಪ್ರಾಯಗಳು ಇರುತ್ತದೆ.
ಜಾತಿಗಣತಿಯಲ್ಲಿ ಈಡಿಗರ ದೀವರು ಎಂಬ ಹೆಸರಿನಲ್ಲಿ ಗೊಂದಲ ಉಂಟಾಗಿತ್ತು. ದೀವರಿಂದಲೇ ನಾವು ಎಲ್ಲರೂ ಬಂದಿದ್ದೇವೆ. ಹಾಗಾಗಿ ದೀವರೆಂದು ಬರೆಯಿಸಲು ಸೂಚನೆ ನೀಡಲಾಗಿತ್ತು. ಅದನ್ನೇ ಶಿವಮೊಗ್ಗದಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದರು.
Pranavananda Sri is embarking on a historic pilgrimage again
