SUDDILIVE || SHIVAMOGGA
ಬಸವನಗುಡಿಯ ಅಧಿಕಾರಿಗಳ ವಸತಿಗೃಹದಲ್ಲಿದ್ದ ಶ್ರೀಗಂಧ ಮರ ಕಳವು-Sandalwood tree stolen from Basavanagudi officials residence
ಬಸವನಗುಡಿಯಲ್ಲಿರುವ ಅಧಿಕಾರಿಗಳ ವಸತಿಗೃಹದ ಬಳಿ ಮೂರು ಶ್ರೀಗಂಧ ಮರ ತುಂಡು ಮಾಡಿ ಕಳ್ಳತನ ಮಾಡಲಾಗಿದೆ. ವಸತಿ ಗೃಹಗಳ ಮನೆಯೊಂದರ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ರಾತ್ರೋರಾತ್ರಿ ತುಂಡು ಮಾಡಿ ಕಳ್ಳತನ ಮಾಡಲಾಗಿದೆ.
ಜಿಲ್ಲಾ ಪಂಚಾಯಿತಿಯಲ್ಲಿ ಚಾಲಕರಾಗಿರುವ ಲೋಕೇಶ್ ಎಂಬುವವರ ಮನೆ ಆವರಣದಲ್ಲಿದ್ದ ಶ್ರೀಗಂಧದ ಮರಕ್ಕೆ ನಡುರಾತ್ರಿ ಕೊಡಲಿ ಹಾಕಲಾಗಿದೆ. ಬೆಳಗಿನ ಜಾವ ಲೋಕೇಶ್ ಮನೆಯಿಂದ ಹೊರ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಇನ್ನು ಮನೆ ಮುಂದೆ ನಿಲ್ಲಿಸಿದ್ದ ಮಹಿಳಾ ಅಧಿಕಾರಿಯೊಬ್ಬರ ದ್ವಿಚಕ್ರ ವಾಹನದ ಚಕ್ರ ಕಳವು ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಎಫ್ಡಿಎ ಸಂಧ್ಯಾ ಅವರ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ನಡುರಾತ್ರಿ ಹಿಂಬದಿಯ ಚಕ್ರ ಕಳ್ಳತನ ಮಾಡಲಾಗಿದೆ. ಸಂಧ್ಯಾ ಅವರಿಗೆ ಬೆಳಗ್ಗೆ ವಿಷಯ ಗೊತ್ತಾಗಿದೆ.
ಇಲ್ಲಿ ಹಲವು ಶ್ರೀಗಂಧದ ಮರಗಳಿದ್ದವು. ಕಳೆದ ಕೆಲವು ಸಮಯದಿಂದ ಇಲ್ಲಿ ರಾತ್ರೋರಾತ್ರಿ ಶ್ರೀಗಂಧದ ಮರಗಳ ಕಳ್ಳತನ ಮಾಡಲಾಗುತ್ತಿದೆ. ಹದಿನೈದು ದಿನದ ಹಿಂದೆಯಷ್ಟೆ ಎರಡು ಶ್ರೀಗಂಧದ ಮರಗಳಿಗೆ ಕೊಡಲಿ ಹಾಕಲಾಗಿತ್ತು. ಒಂದು ಮರ ಕದ್ದೊಯ್ದಿದ್ದ ಕಳ್ಳರು, ಮತ್ತೊಂದು ಮರಕ್ಕೆ ಹಾನಿ ಮಾಡಿದ್ದರು. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Sandalwood tree stolen from Basavanagudi officials residence
