SUDDILIVE || SHIKARIPURA
ಕಾಲೇಜಿನಲ್ಲಿ ಅನುನತಿಯಿಲ್ಲದೆ ಮರ ಕಡಿತ-ಬಿ.ವೈ.ವಿಜೇಂದ್ರ ಪರಿಶೀಲನೆ-Tree cutting without permission in college - BY Vijendra inspects
ಅನುಮತಿ ಇಲ್ಲದೇ ಕಾಲೇಜು ಆವರಣದಲ್ಲಿ ಮರಗಳನ್ನು ಕಡಿದಿರುವ ಹಿನ್ನೆಲೆಯಲ್ಲಿಂದು ರಾಜ್ಯ ಬಿಜೆಪಿ ಅಧ್ಯಕ್ಷರು ಶಾಸಕರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ಶಿಕಾರಿಪುರ ಪ್ರಥಮ ದರ್ಜೆ ಕಾಲೇಜು ಆವರಣಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಪ್ರಾಂಶುಪಾಲರು ಶಾಸಕರ ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳ ಅನುಮತಿಯಿಲ್ಲದೇ, ಕೆಲವಾರು ಮರಗಳ ಕಡಿಯಲಾಗಿದ್ದು, ಈ ಹಿನ್ನೆಲೆಯಲ್ಲಿ, ಶಾಸಕರು ಕಾಲೇಜು ಆವರಣಕ್ಕೆ ತೆರಳಿ ಪ್ರಾಂಶುಪಾಲರನ್ನು ವಿಚಾರಣೆ ನಡೆಸಿದರು. ಅಲ್ಲದೇ, ಮರಗಳ ಕಡಿತದಿಂದಾಗಿ ನಷ್ಟವುಂಟಾಗಿದ್ದು, ಎಚ್ಚರಿಕೆ ನೀಡಿ, ಕೂಡಲೇ ಪರ್ಯಾಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಜೊತೆಗೆ ಈ ಘಟನೆ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿ, ಎಚ್ಚರಿಕೆ ನೀಡಿದರು.
Tree cutting without permission in college - BY Vijendra inspects
