SUDDILIVE || SHIVAMOGGA
ಶಾಂತಿ ಕಾಪಾಡುವಂತೆ ಮನವಿ ಮಾಡಿದರೆ ಶಾಸಕರು ಏಕೆ ಸಿಟ್ಟಾಗುತ್ತಾರೆ-SDPI ಪ್ರಶ್ನೆ-Why do MLAs get angry when asked to maintain peace - SDPI questions
ಮಾರ್ನಮಿ ಬೈಲಿನಲ್ಲಿ ಹರೀಶ್ ಗೆ ಹಲ್ಲೆ ಮಾಡಿದ ಘಟನೆ ಕುರಿತಂತೆ ಶಾಸಕ ಚೆನ್ನಿ ಮತ್ತು SDPI ನ ಜಟಾಪಟಿ ಮುಂದುವರೆದಿದೆ. ಶಾಸಕ ಚೆನ್ನಿ ಹೇಳಿಗೆ ಉತ್ತರ ನೀಡಿದ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಜೀಲಾನ್ ತಿರುಗೇಟುನೀಡಿದ್ದಾರೆ.
ಶಾಸಕ ಚನ್ನಬಸಪ್ಪರವರ ಉ ಎಸ್.ಡಿ.ಪಿ.ಐ ಬಗ್ಗೆ ಹೇಳಿಕೆ ನೀಡಿರುವುದು ಸರಿಯಲ್ಲ. ದೇಶ ಪ್ರೇಮದ ಪಾಠ ಇವರಿಂದ ಕಲಿಯಬೇಕಾಗಿಲ್ಲ. ಮಾತೆತ್ತಿದರೆ ಹಿಂದೂ ಮುಸ್ಲಿಂ ಎಂದು ಭಾಷಣ ಮಾಡಿ ಜನರನ್ನು ಕೋಮುವಾದದ ಕಡೆ ತಳ್ಳಿ ರಾಜಕೀಯ ಕ್ಷೋಭೆ ಉಂಟುಮಾಡುವುದು ಸರಿಯಲ್ಲ.
ಎಸ್.ಡಿ.ಪಿ.ಐ ಶಾಂತಿ ಕಾಪಾಡುವಂತೆ ಮನವಿ ಮಾಡಿದರೆ ಶಾಸಕರು ಏಕೆ ಸಿಟ್ಟಾಗುತ್ತಾರೆ?ಇನ್ನೊಮ್ಮೆ ಶಾಂತಿ ಕಾಪಾಡಲು ಹಾಗೂ ಊಹಾಪೋಹಗಳಿಗೆ ಕಿವಿಗೋಡದೆ ಪ್ರಜ್ಞೆವಂತಿಗೆ ಮೆರೆಯಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಶಿವಮೊಗ್ಗದ ಜನರಲ್ಲಿ ಮನವಿ ಮಾಡುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾಧ್ಯಕ್ಷರಾದ ಜೀಲಾನ್ ಖಾನ್ ತಿಳಿಸಿದ್ದಾರೆ.
Why do MLAs get angry when asked to maintain peace - SDPI questions
