SUDDILIVE || SHIVAMOGGA
ಕೆಎಸ್ಆರ್ಟಿಸಿ ಕುಮಾರ್ ಇನ್ನಿಲ್ಲ-KSRTC Kumar is no more
ನಗರದ ಕೆಎಸ್ಆರ್ಟಿಸಿ ಪೇಪರ್ ಸ್ಟಾಲ್ ನಡೆಸುತ್ತಿದ್ದ ಕುಮಾರ್ (೫೫) ಹೃದಯಘಾತದಲ್ಲಿ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಅವರು ಸುಮಾರು ೩೦ ವರ್ಷಗಳಿಂದ ಸರ್ಕಾರ ಬಸ್ನಿಲ್ದಾಣದಲ್ಲಿ ಪೇಪರ್ ಸ್ಟಾಲ್ ನಡೆಸಿಕೊಂಡು ಬರುತ್ತಿದ್ದರು. ಇವರು ಪತ್ನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಹರಿಹರದಲ್ಲಿ ನಡೆಯಲಿದೆ,
ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಮಾಲತೇಶ್, ಪದಾಧಿಕಾರಿಗಳಾದ ಹುಲಿಗಿಕೃಷ್ಣ, ಮುಕ್ತಾರ ಅಹಮದ್(ನಜೀರ್) , ರಾಮು ಜಿ. ಪರಶುರಾಮ್, ನಾಗಭೂಷಣ್, ಮಲ್ಲಿಕಾರ್ಜುನ್, ಪಾರ್ಥಿಬನ್, ಹರ್ಷ, ಗಜೇಂದ್ರ, ರಾಘವೇಂದ್ರ, ಏಜೆಂಟರ್ಗಳಾದ ಯುವರಾಜ್, ಉಮೇಶ್, ಸತೀಶ್, ಮಂಜುನಾಥ್ ಪಾಟೀಲ್, ಯೋಗೇಶ್, ದತ್ತಣ್ಣ, ದುರ್ಗೋಜಿ, ಮೋಲನೋ ಸಾಬ್, ಶಿವು, ಸಂತಾಪ ಸೂಚಿಸಿದ್ದಾರೆ.
KSRTC Kumar is no more
