SUDDILIVE || SHIVAMOGGA
ಶಿವಮೊಗ್ಗ ಮಾರಿ ಹಬ್ಬದ ಪ್ರಯುಕ್ತ ಟಗರು ಕಾಳಗ ಹಾಗೂ ಕ್ರಿಕೆಟ್ ಪಂದ್ಯಾವಳಿ-Ram fight and cricket tournament on the occasion of Shivamogga Mari festival
ಎರಡು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ನಡೆಯುವ ಮಾರಿ ಹಬ್ಬದ ಅಂಗವಾಗಿ. ಕೋಟೆ ಶ್ರೀ ಮಾರಿಕಾಂಬ ಟಗರು ಕಾಳಗ ಸಮಿತಿ ವತಿಯಿಂದ ಪೋಸ್ಟರ್ ಬಿಡುಗಡೆ ಮಾಡಲಾಯಿತು ಹಾಗೂ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗ ವತಿಯಿಂದ ಮಾರಿಕಾಂಬ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಪೋಸ್ಟರ್ ಬಿಡುಗಡೆ ಮಾಡಿ ಬಹುಮಾನವನ್ನು ಘೋಷಿಸಿದರು.
ಕ್ರಿಕೆಟ್ ಪಂದ್ಯಾವಳಿಯೂ ಫೆಬ್ರವರಿ 7,8 ರಂದು ನಡೆಯಲಿದ್ದು ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡಕ್ಕೆ ಮೊದಲನೇ ಬಹುಮಾನ ಆಗಿ 30 ಕೆಜಿ ತೂಕದ 2 ಟಗರುಗಳು, ದ್ವಿತೀಯ ಬಹುಮಾನ 30 ಕೆಜಿ ತೂಕದ 1ಟಗರು, ತೃತೀಯ ಬಹುಮಾನ 10001 ರು ಹಾಗೂ ಟ್ರೋಫಿ ಘೋಷಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಶಾಸಕರಾದ ಚನ್ನಬಸಪ್ಪ, ಮಾರಿಕಾಂಬ ಸಮಿತಿಯ ಅಧ್ಯಕ್ಷರಾದ SK ಮರಿಯಪ್ಪ, DCC ಬ್ಯಾಂಕಿನ ನಿರ್ದೇಶಕರಾದ ಎಂ ಶ್ರೀಕಾಂತ್, ಜವಳಿ ನಿಗಮದ ಅಧ್ಯಕ್ಷರಾದ ಚೇತನ್ ಕೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕಾಂತೇಶ್, JDS ಮುಖಂಡರಾದ ನರಸಿಂಹ ಗಂಧದ ಮನೆ, ಮುಖಂಡರಾದ ಸುನಿಲ್, ವಡ್ಡಪ್ಪ ಸೀನಣ್ಣ, ಚಿಕ್ಕಲ್ ರಂಗೆಗೌಡ್ರು, ಮಧುಸೂದನ್, ಕುಳ್ಳಿ ರಾಘು, ಗಿರೀಶ್, ಬಾಲಾಜಿ ಮಾರಿಕಾಂಬ ಗೆಳೆಯರ ಬಳಗದ ಕಿರಣ್, ಪವನ್, ಶಬರಿ, ದರ್ಶನ್, ರಾಘು . ಮಾರಿಕಾಂಬ ಟಗರು ಕಾಳಗ ಸಮಿತಿಯ ಸಂದೀಪ್ ಬೆನ್ನಳ್ಳಿ, ಶಂಕರ್ ಗುಂಡ, ಪುರುಷೋತ್ತಮ್, ರಮೇಶ್, ಹರೀಶ್, ರಾಕೇಶ್, ಸತೀಶ್ ನಾಯ್ಡು, RTRಮಂಜು ಹಾಗೂ ನೂರಾರು, ಯುವಕ ಮಿತ್ರರು ಪಾಲ್ಗೊಂಡು ಯಶಸ್ವಿಗೊಳಿಸಿದರು
Ram fight and cricket tournament on the occasion of Shivamogga Mari festival

