ಹಸಿರುಮಕ್ಕಿ ಸೇತುವೆಗೆ ಮೇತಿಂಗಳ ವರೆಗೆ ಗಡುವು, ಸಿಎಂ ನಿಂದ ಉದ್ಘಾಟನೆ- ಜಾರಕಿಹೊಳೆ- Deadline for the Hirudumakki Bridge till May, CM to inaugurate it - Jarakihole

 SUDDILIVE || SHIVAMOGGA

ಹಸಿರುಮಕ್ಕಿ ಸೇತುವೆಗೆ ಮೇತಿಂಗಳ ವರೆಗೆ ಗಡುವು, ಸಿಎಂ ನಿಂದ ಉದ್ಘಾಟನೆ- ಜಾರಕಿಹೊಳೆ- Deadline for the Hirudumakki Bridge till May, CM to inaugurate it - Jarakihole   

Jarakihole, deadline




ಶರಾವತಿ ಹಿನ್ನೀರಿನ ಹಸಿರು ಮಕ್ಕಿ ಸೇತುವೆ ಪರಿಶೀಲನೆ ನಡೆಸಿದ ಪಿಡಬ್ಲೂಡಿ ಸಚಿವ ನಂತರ ಮಾಧ್ಯಮಗಳಿಗೆ ಮಾತನಾಡಿ, ಸಿದ್ದರಾಮಯ್ಯ 2018 ರಲ್ಲಿ ಅಧಿಕಾರವಿದ್ದ ವೇಳೆ ನಡೆದ ಕಾಮಗಾರಿ ಮೇ ತಿಂಗಳ ವರೆಗೆ ಪೂರ್ಣಗೊಳಿಸಲಾಗುವುದು ಎಂದು ಸಚಿವ ಜಾರಕಿ ಹೊಳೆ ತಿಳಿಸಿದರು. 

ಹಸಿರುಮಕ್ಕಿ ಸೇತುವೆ ಮತ್ತಿನಮನೆ ಕರೂರು ಬಾರಂಗಿಯನ್ನ ಸೇರಿಸಲಿದೆ. ಕೊಲ್ಲೂರಿಗೆ ಈ ಸೇತುವೆ 30 ಕಿಮಿ‌ದೂರ ಕಡಿಮೆಯಾಗಲಿದೆ. ಬೇಗ ಮುಗಿಸಲು ಸೂಚನೆಯಾಗಿದೆ ಸಾಗರದಲ್ಲಿ ರಸ್ತೆ ಕಾಮಗಾರಿ ವೈಡ್ನಿಂಗ್ ಮಾಡಲಾಗುತ್ತಿದೆ ಪೊಲೀಸ್ ಠಾಣೆ ಗೆ ಸ್ಥಳ ನೀಡಲಾಗುತ್ತಿದೆ. ಭೂ ಸ್ವಾಧೀನಕ್ಕೆ 11 ಕೋಟಿಯಲ್ಲಿ ಮುಗಿಸಲಾಗುವುದು ಸಿಎಂ ಸಿದ್ದರಾಮಯ್ಯನವರ ವೇಳೆ ಆರಂಭಿಸಲಾಗುವುದು. 

ಸೇತುವೆ ತಡವಾಗಿ ತೊಂದರೆಯಾಗಿದೆ. 2022 ರಲ್ಲಿ ಪಿಲ್ಲರ್  ಸಮಸ್ಯೆಯಾಗಿತ್ತು. ಇದಕ್ಕಾಗಿ ಎರಡು ತಿಂಗಳು ಉದ್ಘಾಟನೆಗೆ ತಡವಾಗಲಿದೆ. ಶಾಸಕರಿಗೆ ಈ ಸೇತುವೆ  ಮೈಸೂರು ಪೇಟವಿದ್ದಂತೆ. ಪೂರ್ಣಗೊಳಿಸಲಾಗುವುದು. ಸೇತುವೆಗೆ ಮತ್ತೆ  56 ಕೋಟಿ ಹಣ ಬಿಡುಗಡೆಯಾಗಿದೆ. 8 ವರ್ಷ ತಡವಾಗಿದೆ ಎಂದು ಸ್ಥಳೀಯರು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ. ಅವರು,  ಸಚಿವರು ಎಂಟು ವರ್ಷ ಕಳೆದಿದೆ. ಮೂರು ತಿಂಗಳು ವಿಳಂಬವಾಗಿದೆ. ಅಧಿಕಾರಿದು ತಡವಾದರೆ ನಮ್ಮದೇ ತಡವಾಗಲಿದೆ ಸಮಸ್ಯೆಯಾಗಿದೆ.  ಹಾಗಾಗಿ ಎರಡು ತಿಂಗಳ ಗಡವಿನಲ್ಲಿ ಸೇತುವೆ ಲೋಕಾರ್ಪಣೆಯಾಗಲಿದೆ ಎಂದರು. 

ಹಸಿರು ಮಕ್ಕಿಯನ್ನ ಮೇ ತಿಂಗಳಲ್ಲಿ ಮುಕ್ತಾಯಗೊಳಿಸಿ ಸಿಎಂ ಉದ್ಘಾಟಿಸಲಿದ್ದಾರೆ ಎಂಬ ಸಚಿವರ ಹೇಳಿಕೆ ಯಾವ ಸಿಎಂ ಉದ್ಘಾಟಿಸಲಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಇತ್ತರಿಸಿದ ಸಚಿವ ಸತೀಶ್ ಜಾರಕಿ ಹೊಳೆ ಸಿಎಂನಿಂದ ಉದ್ಘಾಟನೆ ಅಷ್ಟೆ ಎಂದರು. ದಲಿತ ಸಿಎಂ ಬರ್ತಾರ ಎಂದರೆ ನಮ್ಮಕಡೆಯಿಂದ ಈ ಪ್ರಶ್ನಗೆ ಉತ್ತರವಿಲ್ಲ. ಗೋಪಾಲ ಕೃಷ್ಣ ಬೇಳೂರೇ ಯಾಕೆ ಸಿಎಂ ಆಗಬಾರದು ಎಂದು ಹಾಸ್ಯ ಮಾಡಿದರು.

ಭ್ರಷ್ಠಾಚಾರದ ಆರೋಪದಲ್ಲಿ ಬಿಜೆಪಿ ಶಾಸಕರು ಸಿಕ್ಕಿಕೊಂಡಿರುವ ಪ್ರಶ್ನೆಗೆ ತಿರುಗೇಟು ನೀಡಿದ ಅವರು,  ಭ್ರಷ್ಠಾಚಾರದ ಆರೋಪ ನಮ್ಮ ಮೇಲೆ ಮಾಡಿ ಬಿಜೆಪಿಗರೆ ಸಿಕ್ಕಿಕೊಂಡು ಪ್ರಕರಣಕ್ಕೆ ಸಾಕ್ಷಿಯಾಗಿದ್ದಾರೆ. ಭ್ರಷ್ಠಾಚಾರದ ಬಗ್ಗೆ ಕಡಿಮೆ ಮಾಡುವ ಬಗ್ಗೆ ನಮ್ಮ ಒಳಗೆ ಚರ್ಚೆಆಗಬೇಕಿದೆ ಎಂದರು. ಸಿಎಂ ಸಿದ್ದರಾಮಯ್ಯ ಕುರ್ಚಿ ಬದಲಾವಣೆ ವೇಳೆ ಜಾತಿ ಟ್ರಂಫ ಕಾರ್ಡ್ ಆಡುವ ಬಗ್ಗೆ ದೂರಿದೆ ಎಂಬ ಮಾಧ್ಯಮದ ಪ್ರಶ್ನೆಗೆ  ಅವರು ಅಹಿಂದ ನಾಯಕರೆ ಎಂದು ಅಷ್ಟೆ ಸಮ್ಜಾಯಿಷಿ ನೀಡಿದರು. 

ಖಾನಾಪುರದಿಂದ ತಾಳಗುಪ್ಪದ ವರೆಗೆ ಪಿಡಬ್ಲೂಡಿ ರಸ್ತೆ ಕನೆಕ್ಟ್ ಮಾಡಲಾಗುತ್ತದೆ.  ರಸ್ತೆ ಕಾಮಾಗಾರಿ ಬಜೆಟ್ ನಲ್ಲಿ ಬರೊಲ್ಲ. ಬೇರೆ ಯೋಜನೆಯಲ್ಲಿ ಕಾಮಗಾರಿ ನಡೆಯಲಿದೆ. ಬೇಳೂರಿಗೆ ಸಚಿವಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದ್ದಾರೆ ಎಂದು ಹೇಳಿದರು. 

Deadline for the Hirudumakki Bridge till May, CM to inaugurate it - Jarakihole 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close