SUDDILIVE || SHIVAMOGGA
ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ- Lorry overturns after driver loses control
ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನ ಬೈಲು ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ಸಸಿ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿದೆ.
ಮಧ್ಯಾಹ್ನ 1:00ಯ ಸುಮಾರಿಗೆ ಅಪಘಾತ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾಸ್ಪಾಡಿ ಇಂದ ಮಾಸೂರಿಗೆ ಅಡಿಕೆ ಸಸಿ ಹೊತ್ತೆಯುತ್ತಿದ್ದ ಲಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಶಾಸಕರ ಭೇಟಿ :- ಅನ್ಯ ಕಾರ್ಯದ ನಿಮಿತ್ತ ಶಾಸಕರಾದ ಗೋಪಾಲಕೃಷ್ಣ ಬೇಳೂರು ತೆರಳುತ್ತಿದ್ದಾಗ ಅಪಘಾತ ವಾಗಿದ್ದು ಕಂಡುಬಂದಿದ್ದು ತಕ್ಷಣ ಶಾಸಕರು ಕೆಳಗಿಳಿದು ಅಪಘಾತದ ಮಾಹಿತಿ ಪಡೆದುಕೊಂಡು ಪೊಲೀಸರಿಗೆ ಗಾಯಾಳುಗಳ ಆರೋಗ್ಯ ಕ್ಷೇಮದ ಬಗ್ಗೆ ವಿಚಾರಿಸಿದ್ದಾರೆ. ನಂತರ ವಾಹನ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.
Lorry overturns after driver loses control
