ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮುಂದುವರೆದ ಚಿನ್ನಭರಣ ಕಳವು ಪ್ರಕರಣ- Gold jewellery theft case continues at Shivamogga KSRTC bus stand

 SUDDILIVE  || SHIVAMOGGA

ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮುಂದುವರೆದ ಚಿನ್ನಭರಣ ಕಳವು ಪ್ರಕರಣ- Gold jewellery theft case continues at Shivamogga KSRTC bus stand

Ksrtc, jewellary



ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಬಸ್ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗನ್ನೇ ಕಳ್ಳರು ಕಸಿದುಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ವ್ಯಾನಿಟಿ ಬ್ಯಾಗಿನಲ್ಲಿ ₹2.86 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.


ಹೇಗಾಯ್ತು ಘಟನೆ?


ಗಾಂಧಿ ಬಜಾರ್ ನಿವಾಸಿ ಜಯಲಕ್ಷ್ಮಿ ಅವರು ತಮ್ಮ ಮಗ ಸಾಗರದಲ್ಲಿರುವ ಮದುವೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಸಾಗರಕ್ಕೆ ತೆರಳುವ ಬಸ್‌ ಬಂದಾಗ ಹತ್ತಲು ಹೋದ ವೇಳೆ ಜನದಟ್ಟಣೆ ಇತ್ತು. ಈ ಸಂದರ್ಭ ಅವರು ತಮ್ಮ ಎಡತೋಳಿಗೆ ಹಾಕಿಸಿಕೊಂಡಿರುವ ವ್ಯಾನಿಟಿ ಬ್ಯಾಗ್‌ನಲ್ಲಿ ಯಾರೋ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳುವು


ವ್ಯಾನಿಟಿ ಬ್ಯಾಗ್‌ನಲ್ಲಿ ಸುಮಾರು ₹1,55,000 ಬೆಲೆಯ 50 ಗ್ರಾಂ ತೂಕದ ಹವಳದ ಸರ (ಕೋರಲ್ ನೆಕ್ಲೇಸ್), ₹78,000 ಬೆಲೆಯ 20 ಗ್ರಾಂನ ಮಣಿಸರ ಮತ್ತು ಡಾಲರ್, ₹22,800 ಮೌಲ್ಯದ 6 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು (ಚಿನ್ನದ ಉಂಗುರಗಳು), ಚಿನ್ನದ ಕಿವಿ ಓಲೆ, ಕೈ ಗಡಿಯಾರ (ಕೈಗಡಿಯಾರ) ಹಾಗೂ ₹1,000 ನಗದು ಇತ್ತು ಎಂದು ದೂರದಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡಿದ್ದಾರೆ.

Gold jewellery theft case continues at Shivamogga KSRTC bus stand

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close